

ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಪ್ರತಿ ವರ್ಷ ನಡೆಯುವ “ವಿಶ್ವರೂಪ ದರ್ಶನ” ಕಾರ್ಯಕ್ರಮ ನವೆಂಬರ್ 19 ರಂದು ಪ್ರಾತ:ಕಾಲ ನಡೆಯಲಿದೆ.
ದೇವಾಲಯವನ್ನು ಸಂಪೂರ್ಣವಾಗಿ ರಂಗೋಲಿ ನಂದಾ ದೀಪಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತದೆ. ನಂದಾ ದೀಪಾಲಂಕಾರದ ವೈಭವ ಕಣ್ತುಂಬಿಕೊಳ್ಳಲು ನೂರಾರು ಮಂದಿ ಭಕ್ತಾಧಿಗಳು ಮುಂಜಾನೆ 5 ಗಂಟೆಗೆ ಆಗಮಿಸುತ್ತಾರೆ. ಭಕ್ತಾಭಿಮಾನಿಗಳು ಕುಟುಂಬ ಸಮೇತ ಆಗಮಿಸಿ, “ವಿಶ್ವರೂಪ ದರ್ಶನ”ದಲ್ಲಿ ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಆಹ್ವಾನಿಸಿದ್ದಾರೆ.