

ವಿಪ್ರ ಸಮಾಜ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಇವರ ಸಹಯೋಗದೊಂದಿಗೆ ಈ ದಿನ ನಮ್ಮ ರಕ್ತ ನಿಧಿ ಕೇಂದ್ರ ದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು. ಇದರ ಉದ್ಘಾಟನೆಯನ್ನು ಸ್ಥಳೀಯ ಶಾಸಕರಾದ ಶ್ರೀ ಕಿರಣಕುಮಾರ್ ಕೊಡ್ಗಿಯವರು ನೆರವೇರಿಸಿದರು ಮತ್ತು ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ D.H.O. ಡಾ. ನಾಗಭೂಶಣ ಉಡುಪ, ರೆಡ್ ಕ್ರಾಸ್ ಪದಾದಿಕಾರಿಗಳಾದ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಸತ್ಯನಾರಾಯಣ ಪುರಾಣಿಕ, ಸುರೇಖ ಪುರಾಣಿಕ ಮತ್ತು ಚಂದ್ರಮೋಹನ ಧನ್ಯ ಉಪಸ್ಥಿತರಿದ್ದರು. ಕಾರ್ಥಿಕ್ ಸ್ಕೇನ್ ಮಾಲೀಕರಾದ ಡಾ. ಬಿ. ವಿ ಉಡುಪರು ಸ್ವಾಗತಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು ಮತ್ತು ಶಾಸಕರನ್ನು ಸನ್ಮಾನಿಸಿದರು. ಕಾರ್ಯದರ್ಶಿ ಸೀತಾರಾಮ ಶೆಟ್ಟಿ ವಂದಿಸಿದರು.

