ವಿದ್ಯಾ ಅಕಾಡೆಮಿ ಕಿಡ್ಸ್ ಕಾರ್ನಿವಲ್ : ಹಲವರ ಮೆಚ್ಚುಗೆ

ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿ ಆಶ್ರಯದಲ್ಲಿ ಕುಂದಾಪುರದಲ್ಲಿಯೇ ಮೊದಲ ಬಾರಿಗೆ ಜರುಗಿದ ಕಿಡ್ಸ್ ಕಾರ್ನಿವಲ್ ನೂರಾರು ಎಳೆಯ ಮಕ್ಕಳು ಮತ್ತು ಪೋಷಕರು ಬಂದು ಆಟೋಟಗಳಲ್ಲಿ ಭಾಗವಹಿಸಿ ಸಂತೋಷ ಪಡುವುದರೊಂದಿಗೆ ಅತ್ಯಂತ ಯಶ್ವಸಿಯಾಗಿ ಜರುಗಿತು. ಈ ಮಕ್ಕಳ ಹಬ್ಬದಲ್ಲಿ ಸತೀಶ್ ಹೆಮ್ಮಾಡಿಯವರ ಮ್ಯಾಜಿಕ್ ಶೋ ಮಕ್ಕಳ ಕುತೂಹಲವನ್ನು ಕೆರಳಿಸಿತ್ತು. ಆವರಣದಲ್ಲಿ ಆಯೋಜಿಸಿದ್ದ 360 ಡಿಗ್ರಿ ಸೆಲ್ಫಿ ಪೋಟೋ ಮಕ್ಕಳು ಮತ್ತು ಪೋಷಕರನ್ನು ಆಕರ್ಷಿಸಿತ್ತು. ಕಾರ್ಟೂನ್ ಗೊಂಬೆಗಳ ವೇಷಧಾರಿಗಳು ಈ ಮಕ್ಕಳ ಹಬ್ಬದ ಮೆರುಗನ್ನು ಹೆಚ್ಚಿಸಿದ್ದರು. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಆವರಣದಲ್ಲಿ ಆಯೋಜಿಸದ್ದ ತಿಂಡಿ ತಿನಿಸುಗಳ ಸ್ಟಾಲ್‍ಗಳು ಎಲ್ಲರ ಗಮನ ಸೆಳೆದವು. ಅತ್ಯುತ್ತಮ ಧ್ವನಿ ವ್ಯವಸ್ಥೆ ಹಾಗೂ ಮನಮೋಹಕ ದೀಪಾಲಂಕಾರ ಮಕ್ಕಳಲ್ಲಿಯ ಸಂತೋಷವನ್ನು ಇಮ್ಮಡಿಗೊಳಿಸಿತ್ತು.
ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಸಿದ್ಧಾರ್ಥ್.ಜೆ. ಶೆಟ್ಟಿಯವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಅನಿಷಾ ರೈ ಅವರು ಮಕ್ಕಳು ಹಾಗೂ ಪೋಷಕರೊಂದಿಗೆ ಬೆರೆತು ಈ ಒಂದು ಮಕ್ಕಳ ಹಬ್ಬ ಅತ್ಯಂತ ಸ್ಮರಣೀಯವಾಗುವಂತೆ ನೋಡಿಕೊಂಡರು. ಈ ಕಾರ್ಯಕ್ರಮವನ್ನು ಹೆಸರಾಂತ ನಿರೂಪಕರಾದ ಹಿಸ್ರಾರ್ ಅವರು ನಡೆಸಿಕೊಟ್ಟರು