ವಿದ್ಯಾನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ವಿ.ನಾಗಭೂಷಣ ಹಾಗೂ ಉಪಾಧ್ಯಕ್ಷರಾಗಿ ಎಸ್.ಜಗದೀಶ್ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಮೇ.21: ವಿದ್ಯಾನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ವಿ.ನಾಗಭೂಷಣ ಹಾಗೂ ಉಪಾಧ್ಯಕ್ಷರಾಗಿ ಎಸ್.ಜಗದೀಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಒಮ್ಮತದಿಂದ ಅಧ್ಯಕ್ಷರಾಗಿ ವಿ.ನಾಗಭೂಷಣ ಹಾಗೂ ಉಪಾಧ್ಯಕ್ಷರಾಗಿ ಎಸ್.ಜಗದೀಶ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಎ.ಸದಾನಂದ, ಜಮೀರ್ ಅಹಮದ್, ಹನುಮಂತಪ್ಪ, ಕಿರಣ್‍ಕುಮಾರ್, ರಾಮಕೃಷ್ಣಪ್ಪ, ವೈ.ಸಿ ಮುನೇಗೌಡ, ಲಕ್ಷ್ಮೀನಾರಾಯಣ, ಪುರುಷೋತ್ತಮ, ಮುನಿಯಪ್ಪ, ಅಶೋಕ್‍ಕುಮಾರ್, ಮುನಿಸ್ವಾಮಿ, ಶಖೀಲ್ ಅಹಮ್ಮದ್, ಜಿ.ಸುಮ ಹಾಗೂ ರೇಷ್ಮಾ ಜಬೀನ್ ಉಪಸ್ಥಿತರಿದ್ದರು.
ಸಹಕಾರ ಇಲಾಖೆಯ ಜಗದೀಶ್ ರವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.