ಹೆಬ್ರಿ ವಲಯದ ಪ್ರಸಿದ್ಧ ಪುರೋಹಿತರಾಗಿದ್ದ ವೆ.ಮೂ.ಲಕ್ಷ್ಮೀನಾರಾಯಣ ಹೇರ್ಳೆ (52) ನಿಧನ

JANANUDI.COM NETWORK

ಹೆಬ್ರಿ ವಲಯದ ಪ್ರಸಿದ್ಧ ಪುರೋಹಿತರಾಗಿದ್ದ ವೆ.ಮೂ.ಲಕ್ಷ್ಮೀನಾರಾಯಣ ಹೇರ್ಳೆ (52) ಅಲ್ಪಕಾಲದ ಅಸ್ವಸ್ಥತೆಯಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಂಗಾರಕಟ್ಟೆಯ ಬಾಳ್ಕುದ್ರು ಮಠದಲ್ಲಿ ವೇದಾಧ್ಯಯನ ಮಾಡಿದ್ದ ಇವರು ಸರಳ ಸಜ್ಜನಿಕೆಯಿಂದ ಧಾರ್ಮಿಕ ಕಾರ್ಯವನ್ನು ಬಹಳ ನಿಷ್ಠೆಯಿಂದ ನೆರವೇರಿಸುತ್ತಿದ್ದರು. ಮೂಲತಃ ಹಳೇಸೋಮೇಶ್ವರದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅನುವಂಶೀಯ ಅರ್ಚಕರಾಗಿದ್ದ ಇವರು ದಶಕಗಳ ಹಿಂದೆ ಹೆಬ್ರಿಗೆ ಬಂದು ನೆಲೆಸಿದ್ದರು. ಅಂತರಾಷ್ಟ್ರೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮಿಜಿ ಅಂತಿಮ ದರ್ಶನ ಪಡೆದರು.ಇವರು ಓರ್ವ ಪುತ್ರ ಪುತ್ರಿಯರನ್ನು ಹಾಗೂ ಅಪಾರ ಶಿಷ್ಯರನ್ಮು ಅಗಲಿದ್ದಾರೆ .