ಉಪ್ಪುಂದ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದಿಂದ ’ಈ ಶ್ರವಣ’ ಸಾಧನ ಕೊಡುಗೆ

ಉಪ್ಪುಂದದಲ್ಲಿ ಆಯೋಜಿಸಿದ JCI ಕಾರ್ಯಕ್ರಮ ದಲ್ಲಿ ಕಿವಿ ಕೇಳಿಸದ ವಿದ್ಯಾರ್ಥಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಇವರ ವತಿಯಿಂದ ಶ್ರವಣ ಸಾಧನವನ್ನು ನೀಡಲಾಯಿತು. 15,000/- ಮೌಲ್ಯದ ಈ ಶ್ರವಣ ಸಾಧನವನ್ನು ಡಾ. ದಿನಕಕರ ಶೆಟ್ಟಿ ( U. S. A) ದಂಪತಿಗಳು ನೀಡಿದ್ದು, ಇವರುಗಳು ಸದಾ ಒಂದಲ್ಲಾ ಒಂದು ರೀತಿಯ ದೇಣಿಗೆ ನೀಡುತ್ತಿರುವ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ದಂಪತಿಗಳಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಾ ಚಿರ ಋಣಿ.

ಈ ಕಾರ್ಯಕ್ರಮ ದಲ್ಲಿ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ, ಸದಸ್ಯರಾದ ಡಾ. ಸೋನಿ, ಲಯನ್ ಉಪ್ಪುಂದದ ಅದ್ಯಕ್ಷರು ಮತ್ತು ಲಯನ್ ಸದಸ್ಯರು ಉಪಸ್ಥಿತರಿದ್ದರು.