ಉಡುಪಿ ಪರ್ಯಾಯ – ಶ್ರೀ ಕ್ಷೇತ್ರ ಧ. ಗ್ರಾ. ಅ. ಯೋಜನೆಯ ಹೊರೆಕಾಣಿಕೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕು, ಕೋಟೇಶ್ವರ ವಲಯದ ವತಿಯಿಂದ ಉಡುಪಿ ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವದ ಅಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಗೆ ಮಂಗಳವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಶೆಟ್ಟಿ, ವಿಶ್ವನಾಥ್ ಆಚಾರ್, ಶ್ರೀನಿವಾಸ್ ಗಾಣಿಗ, ಹೆರಿಯಣ್ಣ, ಪ್ರಭಾಕರ್ ಶೆಟ್ಟಿ, ಸುರೇಶ್ ಬೆಟ್ಟಿನ್, ಗೋಪಾಡಿ ಶ್ರೀನಿವಾಸ್ ರಾವ್, ಕೋಣಿ ಕೃಷ್ಣದೇವ ಕಾರಂತ್, ವಾಹನದ ಮಾಲಕರಾದ ಉಮೇಶ್, ಮಾಧವ ಆಚಾರ್, ಯೋಜನಾ ಕೃಷಿ ಅಧಿಕಾರಿ ಚೇತನ್ ಹಾಗೂ ಮೇಲ್ವಿಚಾರಕ ನಾಗರಾಜ್ ಎಚ್, ಸೇವಾಪ್ರತಿನಿಧಿಗಳು, ತರಬೇತಿ ಸಹಾಯಕರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.