ಯು. ಎಸ್. ಶೆಣೈ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

JANANUDI.COM NETWORK

ಯು. ಎಸ್. ಶೆಣೈ

ಬ್ರಹ್ಮಾವರ, ಡಿ. 27: ಹಿರಿಯ ಪತ್ರಕರ್ತ ವಡ್ಸರ್ಸೆ ರಘುರಾಮ ಶೆಟ್ಟಿ ಇವರ ಹೆಸರಿನಲ್ಲಿ ಕೊಡಮಾಡುವ ವಡ್ಸರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಭಾನುವಾರ ಹಿರಿಯ ಪತ್ರಕರ್ತ, ಕುಂದಪ್ರಭ ವಾರ ಪತ್ರಿಕೆಯ ಸಂಪಾದಕ ಯು. ಎಸ್. ಶೆಣೈ ಅವರಿಗೆ ಪ್ರದಾನ ಮಾಡಲಾಯಿತು.
ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ಪ್ರಶಸ್ತಿಯನ್ನು ನಿವೃತ್ತ ಲೋಕಾಯುಕ್ತ ನ್ಯಾ| ಎನ್. ಸ0ತೋಷ ಹೆಗ್ಡೆ ಪ್ರದಾನ ಮಾಡಿ “ಮಾಧ್ಯಮವನ್ನು ನಾಲ್ಕನೇ ಅಂಗವಾಗಿ ಪರಿಗಣಿಸಿದು, ಜನರೇ ಹೊರತು ಸರಕಾರವಾಗಲಿ ಅಥವ ರಾಜಕಾರಣಿಗಳಲ್ಲ” ಎಂದು ಹೇಳಿ ವಡ್ಸರ್ಸೆ ರಘುರಾಮ ಶೆಟ್ಟಿಯವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಯ ಮೂಲಕ ಅವರ ಹೆಸರನ್ನು ಜೀವಂತವಾಗಿರಿಸಿದ್ದುದು, ಬ್ರಹ್ಮಾವರ ತಾಲೂಕು ಪತ್ರಕರ್ತದ ಶ್ಕಾಘನೀಯ ಕಾರ್ಯವಾಗಿದೆ” ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಯು. ಎಸ್. ಶೆಣೈ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು
ಕಾರ್ಯಕ್ರಮವನ್ನು ಉದ್ಯಮಿ ಆನಂದ ಸಿ. ಕು0ದರ್ ಉದ್ಭಾಟಿಸಿದರು. ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸ0ಘದ ಅಧ್ಯಕ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ, ಜಿಲ್ಲಾ ಪತ್ರಕರ್ತರ ಸ0ಘದ ಕಾರ್ಯದರ್ಶಿ ನರ್ಭೀರ್ ಪೆÇಲ್ಯ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಹರಿಷತ್ ಅಧ್ಯಕ ನೀಲಾವರ ಸುರೇಂದ್ರ ಅಡಿಗ, ಕಾರ್ಯಕ್ರಮ ಸಂಚಾಲಕ ವಸ0ತ ಗಿಳಿಯಾರ್, ಸ0ಘದ ಕಾರ್ಯದರ್ಶಿ ರಾಜೀಶ್ ಅಚ್ಚಾಡಿ, ಕೋಶಾಧಿಕಾರಿ ಮೋಹನ್ ಉಡುಪ, ಉಪಾಧ್ಯಕ್ಷ ಚ0ದ್ರಶೇಖರ ಬೀಜಾಡಿ ಮತ್ತು ಸ0ಘದ ಸದಸ್ಯರು ಉಪಸ್ಥಿತರಿದ್ದರು