ಕರ್ಕುಂಜೆಯಲ್ಲಿ “ಸದಾಶಿವ ಪ್ರಭು” ರಿಗೆ ಅಭಿನಂದನೆ


ಕುಂದಾಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿ, ಉಡುಪಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದ ಸದಾಶಿವ ಪ್ರಭು ಅವರನ್ನು ಕೇಂದ್ರ ಸರಕಾರ, ಐ. ಎ. ಎಸ್. ಹುದ್ದೆಗೆ ಪದೋನ್ನತಿ ಪ್ರದಾನಿಸಿರುವುದಕ್ಕೆ ಅವರನ್ನು ಕುಂದಾಪುರ ತಾಲೂಕಿನ ಕರ್ಕುಂಜೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಆರ್. ಆರ್. ಎನ್. ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭದ ಅಧ್ಯಕ್ಷತೆಯನ್ನು ಕರ್ಕಿ ಶ್ರೀಕೃಷ್ಣ ಪೈಪ್ ಇಂಡಸ್ಟ್ರೀಸ್ ಮಾಲಕ ಎನ್. ಭಾಸ್ಕರ ನಾಯಕ್ ವಹಿಸಿದ್ದರು.
ಉದ್ಯಮಿಗಳಾದ ಪಿ. ಗೋಪಾಲಕೃಷ್ಣ ಕಾಮತ್ ಸಿದ್ದಾಪುರ, ಸತೀಶ್ ಕಿಣಿ ಬೆಳ್ವೆ, ಕುಂದಾಪುರ ವಿಠಲ ನೇತ್ರಾಲಯದ ನೇತ್ರ ತಜ್ಞ ಡಾ. ಕೆ. ಶ್ರೀನಾಥ್ ಕಾಮತ್, ಸದಾಶಿವ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಿದರು.
ಉದ್ಯಮಿ ವೆಂಕಟೇಶ ಕಿಣಿ ಬೈಂದೂರು, ಸಾಹಿತಿ, ಜಾದೂಗಾರ ಓಂ ಗಣೇಶ ಉಪ್ಪುಂದ ಸದಾಶಿವ ಪ್ರಭು ಅವರ ಸೇವಾಗುಣ, ಕರ್ತವ್ಯ ನಿಷ್ಠೆ ಬಗ್ಗೆ ಕೊಂಡಾಡಿದರು.
ಸದಾಶಿವ ಪ್ರಭು-ಗೀತಾ ದಂಪತಿಯನ್ನು ಕುಂದಾಪುರ, ಬೈಂದೂರ ತಾಲೂಕಿನಿಂದ ಆಗಮಿಸಿದ ಗಣ್ಯರು ಅಭಿನಂದಿಸಿದರು.
ಸದಾಶಿವ ಪ್ರಭು ಅವರು ಮಾತನಾಡಿ “ಸರಕಾರದ ಅಧಿಕಾರಿಯಾಗಿ ಸಾರ್ವಜನಿಕ ಸೇವೆಯಲ್ಲಿ ಎಷ್ಟೋ ಸಮಸ್ಯೆ, ನೋವು ಅನುಭವಿಸಿದರೂ ಜನರ ಪ್ರೀತಿ, ಗೌರವ ಕಂಡಾಗ ಅದೆಲ್ಲ ಮರೆತು ಸಾರ್ಥಕತೆ ಮೂಡುತ್ತದೆ. ತೃಪ್ತಿ ಉಂಟಾಗುತ್ತದೆ. ಎನ್. ನಾರಾಯಣ ನಾಯಕ್, ಎನ್. ಭಾಸ್ಕರ ನಾಯಕ್ ಅವರ ನೇತೃತ್ವದಲ್ಲಿ ಹಲವು ಗಣ್ಯ ಮಹನೀಯರು ಕರ್ಕುಂಜೆಗೆ ಕರೆಸಿ ಗೌರವ ನೀಡಿರುವುದು ಜೀವನದ ಸ್ಮರಣೀಯ ದಿನ ಆಗಿರುತ್ತದೆ” ಎಂದರು.
ಎನ್. ನಾರಾಯಣ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯು. ಎಸ್. ಶೆಣೈ ನಿರೂಪಿಸಿದರು.