ಈ ವರ್ಷದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ


ಕುಂದಾಪುರ: ಈ ವರ್ಷ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ ದೊರೆತಿದೆ. ಕನ್ನಡದ ಪ್ರಮುಖ ಲೇಖಕರುಗಳಾದ ಡಾ.ಕೆ.ವೈ.ನಾರಾಯಣ
ಸ್ವಾಮಿ, ರೇಣುಕಾ ನಿಡಗುಂದಿ, ಕಮಲಾಕರ ಭಟ್ ಕಡವೆ ಇವರುಗಳು ನಿರ್ಣಾಯಕರಾಗಿ ಸಹಕರಿಸಿರುತ್ತಾರೆ. ಪ್ರಶಸ್ತಿ ಹದಿನೈದು ಸಾವಿರ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಆಗಸ್ಟ್ ಹದಿಮೂರರಂದು ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.