

ಶ್ರೀನಿವಾಸಪುರ 1 : ಮಾವು ಬೆಲೆಯು ತುಂಬಾ ಕುಸಿತವಾದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಬೆಂಬಲ ಬೆಲೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರಕ್ಕಾಗಲಿ, ಜನಪ್ರತಿನಿದಿಗಳಿಗಾಗಲಿ ಕಿಂಚಿತ್ತು ಯೋಚನೆ ಮಾಡಿಲ್ಲ ಇಲ್ಲ. ಮಾವು ತಿರಳು ತೆಗೆಯುವ ಫ್ಯಾಕ್ಟರಿಗಳು ಇಲ್ಲ , ನಮಗೆ ತಿರಳು ತೆಗೆಯುವ ಫ್ಯಾಕ್ಟರಿಗಳು ಇದಿದ್ದರೆನಮಗೆ ಈ ಸಮಸ್ಯೆ ಬರುತಿರಲಿಲ್ಲ. ನೆರಯ ಆಂದ್ರ ಪ್ರದೇಶದ ಫ್ಯಾಕ್ಟರಿಗಳಿಗೆ ಮೊರೆಹೋಗುವ ಪರಿಸ್ಥಿತಿ. ಆಂದ್ರದ ರೀತಿಯಲ್ಲಿ ನಮಗೂ ಸಹ ಬೆಂಬಲ ಬೆಲೆಕೊಡಬೇಕು ಎಂದು ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಂದರು.
ಪಟ್ಟಣದಲ್ಲಿ ಮಾವು ಬೆಳೆಗಾರರ ಸಂಘ ಹಾಗು ವಿವಿಧ ಸಂಘಟನೆಗಳಿಂದ ನಡೆದ ಮಾವು ಬೆಂಬಲ ಬೆಲೆ ಘೋಷಣೆಗಾಗಿ ನಡೆದ ಬಂದ್ ನೇತೃತ್ವ ವಹಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಇಡೀ ತಾಲೂಕಿನ ಮಾವಿಕಾಯಿಯೊಂದಿಗೆ ಬೆಂಗಳೂರಿನ ವಿಧಾನಸೌದ ಮುಂಭಾಗದಲ್ಲಿ ರಾಶಿಹಾಕಿ ನಮ್ಮ ಬೇಡಿಕೆ ಈಡೇರುವವರಿಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ರಾಜ್ಯದಲ್ಲಿ ಹಲವಾರು ಸರ್ಕಾರಗಳು ಬಂದು ಹೋಗಿವೆ ಆದರೆ ಮಾವು ಬೆಳಗಾರರ ಸಂಕಷ್ಟ ಇದುವರೆಗೂ ಪರಿಹಾರವಾಗಿಲ್ಲ. ನೆರಯ ಆಂದ್ರಪ್ರದೇಶದಲ್ಲಿ ಮಾವು ಬೆಳೆಗಾರರಿಗೆ 8 ಸಾವಿರ ಕೊಡತ್ತಾ ಇದ್ದು, ಇದರೊಂದಿಗೆ ರಾಜ್ಯ ಸರ್ಕಾರ 1 ಟನ್ಗೆ 4 ಸಾವಿರ ಸಹಾಯಧನ ನೀಡುತ್ತಿದೆ. ರಾಜ್ಯದಲ್ಲಿನ ಬಲ್ಪ್ ಫ್ಯಾಕ್ಟರಿಗಳು ಇನ್ನು ತೆರೆದೆ ಇಲ್ಲ. ಕೊಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಬಲ್ಪ ಫ್ಯಾಕ್ಟರಿಗಳನ್ನು ತರೆಯಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಹತ್ತು ದಿನಗಳಿಂದ ನಿರಂತರ ಮಾವು ಬೆಳೆಗಾರರು ಮುಷ್ಕರ ನಡೆಸುತ್ತಿದ್ದರೂ ಜಿಲ್ಲಾಧಿಕಾರಿ, ಉಸ್ತವಾರಿ ಸಚಿವರು ಸಂಬಂದಪಟ್ಟ ಅಧಿಕಾರಿಗಳು ಮುಷ್ಕರ ರೊಂದಿಗೆ ಸ್ಪಂದಿಸಿಲ್ಲ. ಉಸ್ತವಾರಿ ಸಚಿವರು ಹುಟ್ಟಿದಿಂದಲೂ ಸಹ ಸಾಹುಕಾರರಗೆ ಬೆಳಿದಿದ್ದು , ಅವರಿಗೆ ರೈತರ ಕಷ್ಟಗಳು ಎಲ್ಲಿ ಅರಿವು ಆಗುತ್ತದೆ ಹೇಳಿ. ರೈತರ ಸಂಕಷ್ಟಗಳ ಈಡೇರಿಸದಿದ್ದರೆ ರೈತರ ಗೋಳು ನಿಮಗೆ ತಟ್ಟುತ್ತದೆ ಕಿಡಿಕಾರಿದರು. ಜಿಲ್ಲಾಧಿಕಾರಿಗಳು ರೈತರ ಪರವಾಗಯೇ ಇದ್ದಾರೆ, ಆದರೆ ಏನು ಮಾಡೋದೋ ? ನಮ್ಮ ಮಾತಿಗೆ ಬೆಲೆಕೊಡಿ ಎಂದರು. ಅದರಂತೆ ನಾಳೆ ( ಗುರುವಾರ) ಸಭೆ ಕರೆದಿದ್ದಾರೆ. ನಾಳೆ ನಮಗೆ ಬೆಂಬಲ ಬೆಲೆ ನೀಡದಿದ್ದರೆ. ಉಗ್ರವಾದ ಹೋರಾಟದ ಮೂಲಕ ನ್ಯಾಷನಲ್ ಹೈವೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬೆಳ್ಳಂಬೆಳಗ್ಗೆಯೇ ಪ್ರತಿಭಟನಾ ಕಾವು ಹೆಚ್ಚಾಗಿತ್ತು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾವಿನ ಕಾಯಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿನ ಅಂಗಡಿಮುಗ್ಗಟ್ಟುಗಳು, ಹೋಟೆಲ್, ಬೇಕರಿಗಳು, ತರಕಾರಿ ಅಂಗಡಿಗಳು , ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕೋಲಾರ, ಚಿಂತಾಮಣಿ, ಮುಳಬಾಗಿಲು ಹೋಗಲು ಬಸ್ಗಳ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ ರೈತರ ಬೇಡಿಕೆಗಳು ಸರ್ಕಾರದ ಹಂತದಲ್ಲಿ ಇದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ತೋಟಗಾರಿಕೆ ಇಲಾಖೆ ನಿರ್ದೇಶಕರು ಎಲ್ಲಾ ಮಾವು ಉದ್ಯಮಿಗಳೊಂದಿಗೆ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿನ ಒಳಗಡೆ ಇರುವ ಸಂಸ್ಕರಣ ಘಟಕಗಳು ವಿಶೇಷವಾಗಿ ಶ್ರೀನಿವಾಸಪುರ ಮಾವು ಖರೀದಿ ಮಾಡಬೇಕು ಎಂದು ಹೇಳಿದ್ದಾರೆ. ಬೆಂಬಲ ಬೆಲೆ ನೀಡುವುದರಿಂದ ರೈತರ ಸಂಕಷ್ಟಕ್ಕೆ ಒಂದಿಷ್ಟು ಸಹಾಯ ಆಗುತ್ತದೆ ಎಂದರು.
ನಾಳೆ ( ಗುರುವಾರ) ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾವು ಬೆಳಗಾರರ 10 ಜನ ಸದಸ್ಯರು, ಉಸ್ತವಾರಿ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ಆಯೋಜನೆ ಮಾಡಲಾಗಿದೆ ಎಂದರು . ಈ ಕ್ಷಣವೇ ಬಂದ್ ಹಿಂಪಡೆದಿದ್ದಾರೆ ಮಾವು ಬೆಳಗಾರರಿಗೆ ಹೃತ್ರ್ಪೂವಕ ಅಭಿನಂದನೆಗಳು ತಿಳಿಸಿದರು.
ಎಸ್ಪಿ ಬಿ.ನಿಖಿಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿ ಉಪವಿಭಾಗಧಿಕಾರಿ ಡಾ.ಮೈತ್ರಿ , ಅಡಿಷನಲ್ ಎಸ್ಪಿಗಳಾದ ರವಿಶಂಕರ್, ಜಗದೀಶ್ , ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಎಂ.ಶ್ರೀನಿವಾಸನ್, ಡಿವೈಎಸ್ಪಿ ನಂದಕುಮಾರ್ ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ, ಮಂಡಲ ಅಧ್ಯಕ್ಷ ರೋಣೂರು ಚಂದ್ರಶೇಖರ್, ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಮುಖಂಡರಾದ ದೊಡಮಲದೊಡ್ಡಿ ಶ್ರೀನಾಥರೆಡ್ಡಿ , ಕದಿರಂಪಲ್ಲಿ ಶಶಿ ಇದ್ದರು.


