

ಐಪಿಎಲ್-2025 ಸರಣಿ ಆರಂಭವಾದ ವರ್ಷದಿಂದ ಈ ಸಲಕಪ್ನಮ್ಹೇಎಂದ ಕೂಗು ಕೇಳಿ ಬರುತ್ತಿರುವ ಆರ್ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗಾಗಿತ್ತು. ಜೊತೆಗೆ ಮೂರು ಸಲ ಐಪಿಎಲ್- ಟ್ರೋಫಿ ಮುತ್ತಿಕುವುದನ್ನು ಸ್ವಲ್ಪದರಲ್ಲೇ ತಪ್ಪಿಕೊಂಡ ವ್ಯಥೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ಕಾಡುತಿತ್ತು. ಈ ಸಲವೂ ಏನಾಗುವುದೋ ಎಂದು ಚಿಂತೆ ಹಲವರನ್ನು ಕಾಡುತಿದ್ದುದು ಸಹಜ. ಆಟದಲ್ಲಿ ಒಂದು ಸಲ ಅರ್.ಸಿ.ಬಿ. ಇನ್ನೊಂದು ಪಂಜಾಬ್ ತಂಡ ಮೇಲು ಗೈ ಸಾಧಿಸುತ್ತಾ, ಈ ಸಲ ಕೊನೆಗೂ ಜಯದ ಅಭಿಲಾಸೆ ಕೈಗೂಡಿದೆ. ಕೊನೆಗೂ ಪಂಜಾಂಬ್ ತಂಡವನ್ನು ಆರು ರನ್ನುಗಳ ಮೂಲಕ ಸೋಲಿಸಿ ಜಯ ಸಾಧಿಸಿದೆ.
ಅಹ್ಮದಾಬಾದ್ದ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಪಾಟೀದಾರ್ ನಾಯಕತ್ವದ ಅರ್.ಸಿ.ಬಿ. ಕಪ್ ಗೆದ್ದುಕೊಂಡಿದೆ. ಸತತ 18 ವರ್ಷಗಳ ಕಾಯುವಿಕೆಯ ನಂತರ ಆರ್ಸಿಬಿ ಚೊಚ್ಚಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದ್ದು ತಂಡಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ಸಂತೋಷ ತಂದಿದೆ.
35 ಬಾಲ್ ಎದುರಿಸಿದ ವಿರಾಟ್ 43 ರನ್ನಳಿಸಿ ಒಮರ್ ಜಾಯ್ಲೆ ವಿಕಟ್ ಒಪ್ಪಿಸಿ ಹೊರನಡೆದರು. ಲಿಯಾಮ್ ಲಿವಿಂಗ್ಸ್ಫೋನ್ 2
ಸಿಕ್ಸರ್ನೊಂದಿಗೆ 25 ರನ್ನಳ ಕಾಣಿಕೆ ನೀಡಿದರು. ಉಪನಾಯಕ 240 ಸೈಕ್’ರೇಟ್ನಲ್ಲಿ ಬ್ಯಾಟ್ ಬಿಸಿ 10 ಬಾಲ್ನಲ್ಲಿ 24.ರನ್ನಳ ಕಾಣಿಕೆ
ನೀಡಿದರು. ಶೆಫಾರ್ಡ್17 ರನ್ನಳಿಸಿ ಔಟ್ ಆದರೆ, ಕೃನಾಲ್ ಪಾಂಡ್ಯ 4 ರನ್ಗಳಿಸಿ ಔಟ್ ಆದರು. ಅರ್.ಸಿ.ಬಿ. ಯ ಜಯದೊಂದಿಗೆ ಕರ್ನಾಟಕವೀಡಿ ಸಂಭ್ರಾಚರಣೆ ಮಾಡಿದ್ದಾರೆ, ಗೆದ್ದ ಕೂಡಲೆ ಪಟಾಕಿ ಸುಡು ಮದ್ದುಗಳನ್ನು ಸುಡಿದು ಕುಣಿದು ಕುಪ್ಪಳಿಸಿದ್ದಾರೆ.
ಜಯದ ನಿಮ್ಮಿತ್ತ ಅರ್.ಸಿ.ಬಿ. ತಂಡ ಇಂದು ಬೆಂಗಳೂರಿನಲ್ಲಿ ಗೆಲುವಿನ ಪೆರೆಡ್ ಮಾಡಲಿದ್ದಾರೆಂದು ತಿಳಿದು ಬಂದಿದೆ.