ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಪ್ರಾಯೋಜಕತ್ವದ ತಲ್ಲೂರು ಬಸ್ಸ್ ತಂಗುದಾಣ ಲೋಕಾರ್ಪಣೆ.

JANANUDI.COM NETWORK

ಕುಂದಾಪುರ, ಜ27. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಪ್ರಾಯೋಜಕತ್ವ ದಲ್ಲಿ ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಗೊಂಡ ಬಸ್ಸ್ ತಂಗು ದಾಣವನ್ನು ರೋಟರಿ ಜಿಲ್ಲಾ ಗವರ್ನರ್ ರೋ. ಎಮ್ .ಜಿ ರಾಮಚಂದ್ರ ಮೂರ್ತಿ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರೊ.ಮಹೇಂದ್ರ ಶೆಟ್ಟಿ ಝೋನ್ I ರ ವಲಯ ಸಹಾಯಕ ಗವರ್ನರ್ ಜೆ.ಪಿ. ಶೆಟ್ಟಿ ಕಾರ್ಯದರ್ಶಿ ಸುಹಾಸ್ ಭಂಡರ್ ಕಾರ್, ರೋಟರಿ ಸದಸ್ಯರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಿರೀಶ್ ನಾಯಕ್, ಪಂಚಾಯತ್ ಸದಸ್ಯರು ಊರಿನ ನಾಗರಿಕರು ಹಾಜರಿದ್ದರು.
ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಹಾಗೂ ಪಂಚಾಯತ್ ಸದಸ್ಯರೂ ಆಗಿರುವ ಜೂಡಿತ್ ಮೆಂಡೊನ್ಸಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
.