ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಆಯ್ಕೆಯಾಗಿರುವರು ಪದಾಧಿಕಾರಿಗಳು ಸಹಕಾರದೊಂದಿಗೆ ರಾಜ್ಯದಲ್ಲಿಯೇ ಮಾದರಿಯನ್ನಾಗಿಸ ಬೇಕು:ಬಂಗವಾದಿ

ಶ್ರೀನಿವಾಸಪುರ 5: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳು ಮುಖ್ಯ ಎಲ್ಲರೂ ಒಬ್ಬರಿಗೊಬ್ಬರು ಸಹಕಾರದೊಂದಿಗೆ ಸಮಿತಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸ ಬೇಕು ಎಂದು ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್ ಸಲಹೆ ನೀಡಿ, ನೂತನ ಸಮಿತಿಗೆ ಶುಭಹಾರೈಸಿದರು.
ಪಟ್ಟಣದ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದರು.
ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಡಿ.ಎನ್.ಮುಕುಂದ, ಜಿಲ್ಲಾ ಸಂಘನಾ ಕಾರ್ಯದರ್ಶಿ ಸಿ.ವಿ.ನಾಗರಾಜ್, ಜಿಲ್ಲಾ ಖಜಾಂಚಿ ಕೆ.ವಿ.ಜಗನ್ನಾಥ್, ಕಸಾಪ ತಾಲೂಕು ಅಧ್ಯಕ್ಷೆ ಪಿ.ಎಸ್.ಮಂಜುಳ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ನೂತನ ಪದಾಧಿಕಾರಿಗಳಾಗಿ ತಾಲೂಕು ಅಧ್ಯಕ್ಷ ಎಸ್.ರವಣಪ್ಪ, ಕಾರ್ಯದರ್ಶಿ ಕೆ.ವೇಣುಗೋಪಾಲ್, ಉಪಾಧ್ಯಕ್ಷಿ ಬಿ.ಜಿ.ರತ್ನಮ್ಮ, ಸಹ ಕಾರ್ಯದರ್ಶಿ ಡಾ.ಸಿ.ಎನ್.ಮಂಜುನಾಥ್ , ಖಾಜಾಂಚಿ ಸಿ.ವಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.