ದ್ವಾರಸಂದ್ರ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 11 ಮಂದಿ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ದ್ವಾರಸಂದ್ರ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 11 ಮಂದಿ ಆಯ್ಕೆಯಾಗಿದ್ದಾರೆ. ಒಟ್ಟು 21 ಮಂದಿ ಚುನಾಣೆಯಲ್ಲಿ ಸ್ಪರ್ಧಿಸಿದ್ದರು.
ಮುನಿವೆಂಕಟಪ್ಪ, ಡಿ.ಎನ್.ಚಂದ್ರಾರೆಡ್ಡಿ, ಪ್ರಕಾಶ್, ಎಂ.ಶ್ರೀನಿವಾಸಪ್ಪ ಡಿ.ವಿ.ಸದಾಶಿವರೆಡ್ಡಿ, ಕೆ.ಶ್ರೀನಿವಾಸರೆಡ್ಡಿ, ಡಿ.ವಿ.ವೆಂಕಟೇಶರೆಡ್ಡಿ, ವೆಂಕಟೇಶಪ್ಪ, ಡಿ.ಇ.ಶ್ರೀನಿವಾಸರೆಡ್ಡಿ, ಜಿ.ಮಂಜುಳ, ವೆಂಕಟಲಕ್ಷ್ಮಮ್ಮ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಎಂ.ಶಂಕರಪ್ಪ, ಸ್ಥಳೀಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ವೆಂಕಟರಾಮರೆಡ್ಡಿ ಇದ್ದರು.