ಮೆದುಳು ಕೇನ್ಸರ್ ನಿಂದ ಬಳಲುತ್ತಿದ್ದ ಬಾಲಕನಿಗೆ, ಕುಂದಾಪುರ ರೆಡ್ ಕ್ರಾಸ್ ನಿಂದ ಹತ್ತು ಸಾವಿರ ದೇಣಿಗೆ

JANANUDI.COM NETWORK

ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ 11 ವರ್ಷ ಪ್ರಾಯದ ವಿದ್ಯಾರ್ಥಿ ತಕ್ಶಿಲ್ (Thakshil) ಮೆದುಳು ಕೇನ್ಸರ್ ನಿಂದ ಬಳಲುತ್ತಿದ್ದು K.M.C. ಮಣಿಪಾಲ್ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈತನ ಚಿಕಿತ್ಸೆಗಾಗಿ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯಿಂದ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಲಾಯಿತು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಭಾಪತಿ ಗಳಾದ ಶ್ರೀ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ರು ಗಳಾದ ಗಣೇಶ್ ಆಚಾರ್ಯ, ಸೋನಿ ಡಿಕೋಸ್ಟಾ, ಮತ್ತು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ತಕ್ಶಿಲ್ ನ ತಾಯಿ ಈ ದೇಣಿಗೆ ಸ್ವೀಕರಿಸಿದರು.