ಟಿ. ಬಿ. ಮುಕ್ತ ಭಾರತದ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕದಿಂದ ಸಹಾಯ ಹಸ್ತ

ಭಾರತ ಸರ್ಕಾರದ ಟಿ. ಬಿ. ಮುಕ್ತ ಭಾರತದ ಕಾರ್ಯಕ್ರಮ ದಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ ಸಾರ್ವಜನಿಕ ಆರೋಗ್ಯ ಕೇಂದ್ರಗಳೊಂದಿಗೆ ಕೈ ಜೋಡಿಸಿ ಇಪ್ಪತ್ತೈದು ರೋಗಿಗಳಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡಲು ನಿಶ್ಚಯಿಸಿದೆ. ಒಂದೊಂದು ಸಾವಿರ ಬೆಲೆ ಬಾಳುವ ಈ ಸಾಮಾಗ್ರಿಗಳನ್ನು ಆರು ತಿಂಗಳ ಕಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಸರಬರಾಜು ಮಾಡಲು ಇಂದಿನಿಂದ ನೀಡುತ್ತಿದ್ದವು. ಸುಮಾರು ಒಂದುವರೆ ಲಕ್ಷದ ಈ ದೇಣಿಗೆಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ರೆಡ್ ಕ್ರಾಸ್ ನ ಕಲವೇ ಸದಸ್ಯರು ಬರಿಸಿದ್ದಾರೆ.