ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ “ಸುವಿದಾ ಪ್ಯಾಡ್” ಕಾರ್ಯಕ್ರಮ

JANANUDI.COM NETWORK

ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕವು ಜೂನಿಯರ್ ಕಾಲೇಜು‌ ಕುಂದಾಪುರ ಇವರೊಂದಿಗೆ ಸೇರಿ “ಸುವಿದಾ ಪೇಡ್ ಕ್ರಾಂತಿ” ಆಚರಿಸಿತು. ಇದರ ಉದ್ಗಾಟನೆಯನ್ನು ಕುಂದಾಪುರ ಪುರ ಸಭೆ ಅದ್ಯಕ್ಷರಾದ ಶ್ರೀಮತಿ ವೀಣಾ ಭಾಸ್ಕರ ಮೆಂಡನ್ ಉದ್ಗಾಟಿಸಿದರು. ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿ ವಹಿಸಿದರು. ಜೂನೀಯರ್ ಕಾಲೇಜು ಪ್ರಾಂಶುಪಾಲರಾದ ಬಿ.ಜಿ. ರಾಮಕ್ರಷ್ಣ, ಉಪ ಪ್ರಾಂಶುಪಾಲರಾದ ವಿನಿತ ಗಾಂವಕರ್, ರೆಡ್ ಕ್ರಾಸ್ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶ್ರೀ ಶಿವರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ತಿತಿಯಿದ್ದರು. ಸಭಾಪತಿಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಬಿ.ಜಿ. ರಾಮಕ್ರಷ್ಣ ಇವರು ಕಾಲೇಜು ವತಿಯಿಂದ ಮಾತನಾಡಿದರು. ಉದ್ಗಾಟಕರಾದ ವೀಣಾ ಮೆಂಡನ್ ರೆಡ್ ಕ್ರಾಸಿನ ಎಲ್ಲಾ ಸಮಾಜ ಮುಖಿ ಕಾರ್ಯವನ್ನು ಶ್ಲಾಘಿಸಿದರು. ಅದ್ಯಾಪಕರಾದ ಉದಯಕುಮಾರ್ ಶೆಟ್ಟಿ ದನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಡಾ. ಸೋನಿ, ಎ. ಮುತ್ತಯ್ಯಶೆಟ್ಟಿ, ಗಣೇಶ ಆಚಾರ್ಯ, ಸೀತಾರಾಮ ನಕ್ಕತಾಯ, ಸತ್ಯನಾರಾಯಣ ಪುರಾಣಿಕ್, ಸಂದ್ಯಾ ನಾಯಕ್( NSS coordinator & YRC coordinator) ವಿದ್ಯಾರ್ಥಿನಿಯರು ಹಾಜರಿದ್ದರು. ಕಾರ್ಯದರ್ಷಿ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಉದಯಕುಮಾರ ಶೆಟ್ಟಿ ವಂದಿಸಿದರು