

ಗಂಗೊಳ್ಳಿ ; ಕ್ರೈಸ್ತ ಜ್ಯುಬಿಲಿ ವರ್ಷದ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಕೊಸೆಸಾಂವ್ ಮಾತಾ ಚರ್ಚ್ ನಲ್ಲಿ ” ವಿದ್ಯಾರ್ಥಿಗಳ ಜ್ಯುಬಿಲಿ” ಯನ್ನು ಜೂನ್ 8, 2025 ರಂದು ಆಚರಿಸಲಾಯಿತು.
ಗಂಗೊಳ್ಳಿ ಚರ್ಚಿನ ಧರ್ಮಗುರುಗಳಾದ ವಂ. ಗುರು ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು, ವಿದ್ಯಾರ್ಥಿಗಳಾದ ಅಮಿಷಾ ಫೆರ್ನಾಂಡಿಸ್, ರೀಮಾ ಡಿ ಅಲ್ಮೇಡಾ, ಸಿಂಡ್ರೆಲಾ ರೇಬೆರೊ, ಟ್ರಿನಿಟಾ ರೆಬೆಲ್ಲೊ, ವಿನ್ಸಿಟಾ ರೆಬೆಲ್ಲೊ, ಮಾರಿಯೊ ಒಲಿವೇರಾ, ಕಾಲಿಸ್ಟಾ ರೆಬೆರೊ, ರಿಶೋನ್ ಸುವಾರಿಸ್ ರವರು ಸಕ್ರಿಯರಾಗಿ ಭಾಗವಹಿಸಿದಂತಹ ಈ ಬಲಿಪೂಜೆಯಲ್ಲಿ ಧರ್ಮಗುರುಗಳು ಪ್ರವಚನ ನೀಡಿ ” ನಮ್ಮಲ್ಲಿರುವ ಪ್ರತಿಭೆಗಳನ್ನು ಹಾಗೂ ಅವಕಾಶಗಳನ್ನು ಗುರುತಿಸಿ ಅವುಗಳನ್ನು ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಹೆತ್ತವರ ಶ್ರಮವನ್ನು ಸಾಕಾರಗೊಳಿಸುವಂತಹ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಬೇಕೆಂದು” ಹೇಳಿದರು.
ತದನಂತರ ವಂದನೀಯ ಗುರು ತೋಮಸ್ ರೋಶನ್ ಡಿಸೋಜರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಯ್ಜಿವಲ್ಡ್ ಮೀಡಿಯಾದ ಪ್ರಮುಖರಾದ ವಾಲ್ಟರ್ ಡಿಸೋಜ, ನಂದಳಿಕೆಯವರು ಮುಖ್ಯ ಅತಿಥಿ ಹಾಗೂ ಪ್ರಮುಖ ಭಾಷಣಕರ್ತರಾಗಿ ಆಗಮಿಸಿ ” ನಾವು ಕೇವಲ ಹಣಗಳಿಸುವ ಯಂತ್ರಗಳಾಗುದಕ್ಕಿಂತ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ಸಾಗಿಸುವಂತವರಾಗಿರಬೇಕು. ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಪೋಷಿಸುವಂತವರಾಗಬೇಕು. ಇತರರ ಅನುಕರಣೆ ಹಾಗೂ ಸ್ಪರ್ಧೆಗಿಳಿಯುವುದು ನಮ್ಮ ಧ್ಯೇಯವಲ್ಲ, ಅಪಧೈರ್ಯದಿಂದ ದೂರವಾಗಿ ಹಾಗೂ ಹಾಯಾಗಿರುವ ವಲಯದಿಂದ ಹೊರಬಂದು , ಸಾಧಿಸುವ ಛಲ ನಮ್ಮದಾದಾಗ ನಾವು ಜಯಗಳಿಸಲು ಸಾಧ್ಯ, ನಮ್ಮ ಸಾಧನೆ ಹಾಗೂ ಒಲವು ಅಧಿಕಾರವುಳ್ಳ ಹಾಗೂ ಸಮಾಜದಿಂದ ಗೌರವಿಸುವಂತಹ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗದತ್ತ ಇದ್ದಲ್ಲಿ ನಾವು ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕಾಯಕ ಯಾವುದೇ ಆಗಿರಲಿ, ಎಲ್ಲಿಯೇ ಆಗಿರಲಿ ಅದರಲ್ಲಿ ಶ್ರೇಷ್ಟತೆ ಹಾಗೂ ಗೌರವವನ್ನು ಕಾಣುವಂತಾಗಬೇಕು. ಇಂದಿನ ದಿನ ಒಳ್ಳೆಯದಲ್ಲ, ನಾಳೆಯ ದಿನ ಒಳ್ಳೆಯದಲ್ಲ ಆದರೆ ನಾಳೆಯ ನಂತರದ ದಿನ ನಮ್ಮದು ಅತೀ ಸುಂದರವಾದ ದಿನವೆಂದು ನೆನೆದು ಕ್ರಿಯಾಶೀಲರಾಗೋಣ” ಎಂದು ವಿದ್ಯಾರ್ಥಿಗಳು ಹಾಗೂ ಹೆತ್ತವರಿಗೆ ಜೀವನದಲ್ಲಿ ಯಶಸ್ಸು ಸಾಧಿಸಿರೆಂದು ಹುರಿದುಂಬಿಸಿದರು.
ಚರ್ಚಿನ ಶಿಕ್ಷಣ ಆಯೋಗದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಶಿಕ್ಷಣ ಆಯೋಗದ ಸಂಚಾಲಕಿ ಆನ್ನಿ ಕ್ರಾಸ್ಟೊ ಸಂಯೋಜಿಸಿದರು. ಚರ್ಚಿನ ಧರ್ಮಗುರುಗಳಾದ ವಂ. ಗುರು ತೋಮಸ್ ರೋಶನ್ ಡಿಸೋಜ ಸ್ವಾಗತಿಸಿದರು, ಎಲ್ರಾಯ್ ಕಿರನ್ ಕ್ರಾಸ್ಟೊ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು, ಚರ್ಚಿನ ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್ ಧನ್ಯವಾದ ನೀಡಿದರು.
ಓವಿನ್ ರೆಬೆಲ್ಲೊ, ರಿಚ್ಚರ್ಡ್ ಕಾರ್ಡಿನ್, ಜೆನ್ನಿ ಬುತ್ತೆಲ್ಲೊ, ಪ್ರೀತಿ ಫೆರ್ನಾಂಡಿಸ್, ಫೆಲಿಕ್ಸ್ ರೇಬೆರೊ, ವಿನ್ಸಿಟಾ ಲೋಬೊ ಹಾಗೂ ಶಿಕ್ಷಣ ಆಯೋಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.




