ಸ್ಟೆಲ್ಲಾಮಾರಿಸ್‌ ಚರ್ಚ್‌ ಕಲ್ಮಾಡಿ – ಸುವರ್ಣ ಮಹೋತ್ಸವ ಆಚರಣೆ (ಅಹ್ವಾನ- ಚರ್ಚಿನ ಚರಿತ್ರೆ)

ಕಲ್ಮಾಡಿಯ ಸ್ಟೆಲ್ಲಾಮಾರಿಸ್ ಚರ್ಚ್ ಕರಾವಳಿ ಕರ್ನಾಟಕದ ಭಕ್ತರಿಗೆ ಚಿರಪರಿಚಿತ ಮತ್ತು ಎಲ್ಲಾ ಧರ್ಮದ ಜನರು ಭೇಟಿ ನೀಡುವ ಸ್ಥಳವಾಗಿದೆ. ಮಲ್ಪೆ - ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿರುವ ಚರ್ಚ್ ರಾಷ್ಟ್ರೀಯ ಹೆದ್ದಾರಿ 66 (ಕರಾವಳಿ ಬೈ-ಪಾಸ್) ರಿ೦ದ ಕೇವಲ 3 ಕಿಮೀದೂರದಲ್ಲಿದೆ.
ಅರಬ್ಬಿ ಸಮುದ್ರಕ್ಕೆ ಸಮೀಪದಲ್ಲಿರುವ ಈಚರ್ಚ್‌ನನ್ನು 'ಸ್ಟೆಲ್ಲಾಮಾರಿಸ್'  ಅಂದರೆ 'ಸಮುದ್ರದತಾರೆ' ಎಂದು ಕರೆಯಯುತ್ತಾರೆ.ಮೊದಲು, ಕಲ್ಮಾಡಿಯ ಜನರು ತಮ್ಮ ಆಧ್ಯಾತ್ಮಿಕ ಅಗತ್ಯತೆಗಳಿಗಾಗಿ ತೊಟ್ಟಂ ಅಥವಾ ಉಡುಪಿಯ ಚರ್ಚಿಗೆ ಭೇಟಿ ನೀಡಬೇಕಾಗಿತ್ತು. ಹೀಗಾಗಿ ಕಲ್ಮಾಡಿಯ ಜನರ ಧಾರ್ಮಿಕ ಅಗತ್ಯತೆಗಳಿಗಾಗಿ ಕಲ್ಮಾಡಿಯಲ್ಲಿಯೇ ಒಂದು ಪುಟ್ಟ ಪ್ರಾರ್ಥನಾಮಂದಿರದ ಸ್ಥಾಪನೆಯ ಅಗತ್ಯತೆ ಕಂಡು ಬಂದಿತು. ಪ್ರಾರ್ಥನ ಮಂದಿರದ ಅಗತ್ಯತೆಯನ್ನು ಅರಿತು ಕಲ್ಮಾಡಿಯವರೇ ಆದ ಧರ್ಮಗುರು ಚಾರ್ಲ್ಸ್  ಡಿಸೋಜಾ ರವರು ಊರ ಜನರ ಸಹಕಾರದಿಂದ ಕಲ್ಮಾಡಿಯಲ್ಲಿ ಮೊತ್ತ ಮೊದಲ ದೇವಾಲಯ ನಿರ್ಮಾಣವಾಯಿತು.ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಆಗಿದ್ದ ಅತೀ ವಂದನೀಯ ಡಾಕ್ಟರ್ ಬಾಸಿಲ್ ಡಿಸೋಜಾ ರವರು 1972 ರಫೆಬ್ರವರಿ 5 ರಂದು ಈ ನೂತನ ಚರ್ಚಿನ ಆಶೀರ್ವಚನ ಗೈದು ಲೋಕಾರ್ಪಣೆ ಮಾಡಿದರು.
1987ರಲ್ಲಿ ಧರ್ಮಗುರುಗಳಾದ ಡೆನಿಸ್ ಕಾಸ್ತಲಿನೋ ರವರು ಕಲ್ಮಾಡಿ ಸ್ಟೆಲ್ಲಾಮಾರಿಸ್ ಚರ್ಚಿನ ಪ್ರಥಮ ಧರ್ಮಗುರುವಾಗಿ ನೇಮಕಗೊಂಡು ಅಧಿಕಾರ ವಹಿಸಿಕೊಂಡರು. 1991ರಲ್ಲಿ ಮಂಗಳೂರಿ ನಬಿಷಪ್ ಅವರು ಕಲ್ಮಾಡಿಯ ಸ್ಟೆಲ್ಲಾಮಾರಿಸ್ ಚರ್ಚ್ ಅನ್ನು ಸ್ವತಂತ್ರ ದೇವಾಲಯ ಎಂದು ಘೋಷಿಸಿದರು.ವ೦ದನೀಯ ಡೆನಿಸ್ ಕಾಸ್ತಲಿನೋ ಅವರ ನಂತರ ಬಂದ ವ೦ದನೀಯ ರಾಬರ್ಟ್ ಪಿಂಟೊ ಕೂಡ ಚರ್ಚನ್ನು ಅಭಿವೃದ್ಧಿಪಡಿಸಲು ಶ್ರಮಿಸಿದರು. ಅವರ ನಂತರ, ವ೦ದನೀಯ ಐವನ್ ಡಿ'ಮೆಲ್ಲೊ ಅವರು ಅಧಿಕಾರ ವಹಿಸಿಕೊಂಡರು ಮತ್ತು ಅವರ ಅಧಿಕಾರಾವಧಿಯಲ್ಲಿ ಚರ್ಚಿಗೆ ಹೊಂದಿಕೊಂಡಿರುವ ಜಮೀನನ್ನು ಖರೀದಿಸಿದರು.

ತದನ೦ತರ ಕೆಲವು ವರ್ಷಗಳಿಗೆ ಚರ್ಚು ಜೆಸ್ವಿತ್‌ ಸಭೆಯ ಅಧಿಕಾರದಲ್ಲಿತ್ತು. ಅನೇಕ ಅಭಿವೃದ್ಧಿ ಕಾರ್ಯಗಳೊಂದಿಗೆ ಜೆಸ್ವಿತ್‌ ಸಭೆಯ ಧರ್ಮಗುರುಗಳು ಚರ್ಚ್ ಅನ್ನು ಹೊಸ ಸ್ತರಕ್ಕೆ ಕೊಂಡೊಯ್ದರು. ಹಲವು ಅಭಿವೃದ್ಧಿ ಕಾರ್ಯಗಳೆ೦ದರೆ ಅತೀ ಅಗತ್ಯವಾದ ಸ್ಮಶಾನದ ನಿರ್ಮಾಣ, ವೆಲಂಕಣಿ ಮಾತೆಗಾಗಿ ಗ್ರೊಟ್ಟೊ ಇತ್ಯಾದಿ. ವ೦ದನೀಯ ರಿಚರ್ಡ್ ಮಸ್ಕರೇನ್ಹಸ್, ವ೦ದನೀಯ ಜೋಸೆಫ್ ಡಿʼಸೋಜಾ, ವ೦ದನೀಯ ಮ್ಯಾಕ್ಸಿಮ್ ಮಿಸ್ಕಿತ್ ರ್ಚರ್ಚಿನಲ್ಲಿ ಸೇವೆ ಸಲ್ಲಿಸಿದ ಜೆಸ್ವಿತ್‌ ಧರ್ಮಗುರುಗಳು.
    ಜೂನ್, 2012 ರಲ್ಲಿ, ವ೦ದನೀಯ ಅಲ್ಬನ್ ಡಿಸೋಜಾಅವರು ಧರ್ಮಗುರುಗಳಾಗಿ ಅಧಿಕಾರ ವಹಿಸಿಕೊಂಡರು. ಅವರು ಕಲ್ಮಾಡಿಯ ಸ್ಟೆಲ್ಲಾಮಾರಿಸ್ ರ್ಚ್‌ನ ಹೊಸ ಕಟ್ಟಡವನ್ನು ದೋಣಿಯ ಆಕಾರದಲ್ಲಿ ನಿರ್ಮಿಸಲು ಪ್ರಾರಂಭಿಸಿದರು ಮತ್ತು ದೀಪಸ್ತ೦ಭ ಆಕಾರದಲ್ಲಿ ಗ೦ಟೆ ಗೋಪುರವನ್ನು ಸಹ ನಿರ್ಮಿಸಿದರು.ಜನವರಿ 6, ೨೦೧೮ ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಉಡುಪಿಯ ಬಿಷಪ್ ಅತೀ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೊಬೋ, ಮಂಗಳೂರು ಬಿಷಪ್ ಅತೀ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗದ ಬಿಷಪ್ಅತೀವಂದನೀಯ ಡಾ| ಫ್ರಾನ್ಸಿಸ್ ಸೆರಾವೋ, ಗುಲ್ಬರ್ಗದ ಬಿಷಪ್ ಡಾ.ರಾಬರ್ಟ್ ಮಿರಾಂದ ಅವರ ಉಪಸ್ಥಿತಿಯಲ್ಲಿ ವಿಶಿಷ್ಟವಾದ ಚರ್ಚನ್ನುಉದ್ಘಾಟಿಸಲಾಯಿತು.

ಜುಲೈ 5, 2021 ರಂದು, ವಂದನೀಯ ಆಲ್ಬನ್ ಡಿʼಸೋಜಾ ಅವರು ಅತ್ತೂರಿನ ಸ೦ತ ಲಾರೆನ್ಸ್ ಮೈನರ್ ಬೆಸಿಲಿಕಾಗೆ ರೆಕ್ಟರ್ ಆಗಿ ವರ್ಗಾವಣೆಗೊ೦ಡರು ಮತ್ತು ವ೦ದನೀಯ ಬ್ಯಾಪ್ಟಿಸ್ ಮಿನೆನೆಜಸ್ ಅವರು ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ ಚರ್ಚಿನ ನೂತನ ಧರ್ಮಗುರುಗಳಾಗಿ ಮತ್ತು ವ೦ದನೀಯ ರೋಯ್‌ ಲೋಬೊ ಅವರು ಸಹಾಯಕಧರ್ಮಗುರುಗಳಾಗಿ ಅಧಿಕಾರ ವಹಿಸಿಕೊ೦ಡರು.
ಸ್ಟೆಲ್ಲಾಮಾರಿಸ್ ಚರ್ಚ್ ತನ್ನ ಅಸ್ತಿತ್ವದ (1972-2022) ಸುವರ್ಣ ಮಹೋತ್ಸವವನ್ನು ಆಗಸ್ಟ್ 15, 2022 ರಂದು ಆಚರಿಸುತ್ತಿದೆ.


ಕಾರ್ಯಕ್ರಮದ ವಿವರಗಳು ಆಮಂತ್ರಣ ಪತ್ರಿಕೆ ಮತ್ತು ಕರಪತ್ರದಲ್ಲಿವೆ.



ವೆಲ೦ಕಣಿ ಮಾತೆಯ ಪುಣ್ಯಕ್ಷೇತ್ರ, ಕಲ್ಮಾಡಿ (ವೆಲ೦ಕಣಿ ಮಾತೆಯ ಕೇ೦ದ್ರ, ಉಡುಪಿ ಧರ್ಮಪ್ರಾ೦ತ್ಯದ ಅಧಿಕೃತ ಪುಣ್ಯಕ್ಷೇತ್ರವೆ೦ದು ಘೋಷಣೆ)

ಕಲ್ಮಾಡಿಯಲ್ಲಿರುವ ವೆಲ೦ಕಣಿ ಮಾತೆಯ ಕೇಂದ್ರವು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ವೆಲಂಕಣಿ ಮಾತೆಯ ಪ್ರತಿಮೆಯನ್ನು ಆಗಸ್ಟ್ 15, 1988 ರಂದು ಉಡುಪಿ ಚರ್ಚ್‌ನಿಂದ ಮೆರವಣಿಗೆಯಲ್ಲಿ ತರಲಾಯಿತು. ಈ ಪ್ರತಿಮೆಯನ್ನು ವ೦ದನೀಯ ವಿಲ್ಸನ್ ಡಿಸೋಜಾ ಅವರು ಕೊಡುಗೆಯಾಗಿ ನೀಡಿದರು ಮತ್ತು ಈ ಪ್ರತಿಮೆಯನ್ನುತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತರಲಾಯಿತು.

1988 ರ ಆಗಸ್ಟ್ 15 ರಂದು ಕಲ್ಮಾಡಿಯಲ್ಲಿ ಅಂದಿನ ಮಂಗಳೂರಿನ ಬಿಷಪ್ ಅತೀ ವ೦ದನೀಯ ಡಾ. ಬಾಸಿಲ್ ಡಿಸೋಜಾ ಅವರು ವೆಲ೦ಕಣಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಥಾಪಿಸಿದರು. ಪ್ರತಿಷ್ಠಾಪನೆಯ ನಂತರ, ಇಂದಿಗೂ ಕೇಂದ್ರದಲ್ಲಿ ಅನೇಕ ಪವಾಡಗಳು ನಡೆದಿವೆ.

ಕಲ್ಮಾಡಿಯಲ್ಲಿರುವ ವೆಲ೦ಕಣಿ ಮಾತೆಯ ಕೇಂದ್ರವನ್ನು 15 ಆಗಸ್ಟ್ 2022 ರಂದು ಉಡುಪಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲಾಗುವುದು. ಈ ಧಾರ್ಮಿಕ ಕಾರ್ಯಕ್ರಮವು 15ನೇ ಆಗಸ್ಟ್ 2022 ರಂದು ಬೆಳಿಗ್ಗೆ 10.00 ಗಂಟೆಗೆ ಕೃತಜ್ಞತಾಪೂರ್ವಕವಾಗಿ ದಿವ್ಯಬಲಿಪೂಜೆಯ ಮುಖಾ೦ತರ ನಡೆಯಲಿರುವುದು:

ಈದಿವ್ಯ ಬಲಿಪೂಜೆಯಲ್ಲಿ ಭಾಗವಹಿಸುವ ಬಿಷಪ್ ಸ್ವಾಮಿಗಳು

ಅತೀ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಬಿಷಪ್

ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ, ಮಂಗಳೂರು ಬಿಷಪ್

ಅತೀ ವ೦ದನೀಯ ಡಾ. ಅಲೋಶಿಯಸ್ ಪಾವ್ಲ್ ಡಿʼಸೋಜಾ, ಮಂಗಳೂರಿನ ನಿವೃತ್ತ ಬಿಷಪ್

ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ, ಶಿವಮೊಗ್ಗ ಬಿಷಪ್

ಅತೀ ವಂದನೀಯ ಡಾ.ರಾಬರ್ಟ್ ಮಿರಾಂಡಾ, ಗುಲ್ಬರ್ಗಾ ಬಿಷಪ್

ಅತೀ ವಂದನೀಯ ಡಾ.ಹೆನ್ರಿ ಡಿʼಸೋಜ, ಬಳ್ಳಾರಿ ಬಿಷಪ್

ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಯಿ, ಬೆಳ್ತಂಗಡಿ ಬಿಷಪ್

ಅತೀ ವಂದನೀಯ ಡಾ. ಗೀವರ್ಗೀಸ್ ಮಾರ್ ಮಕರೀಯೊಸ್ ಕುಲಾಯಿಲ್, ಪುತ್ತೂರಿನ ಬಿಷಪ್

ಕಾರ್ಯಕ್ರಮದವಿವರಗಳು ಆಮಂತ್ರಣ ಪತ್ರಿಕೆ ಮತ್ತು ಕರಪತ್ರದಲ್ಲಿವೆ.

                                                   ವ೦ದನೀಯ ಬ್ಯಾಪ್ಟಿಸ್ಟ್‌ ಮಿನೇಜಸ್‌

                                                             ಧರ್ಮಗುರುಗಳು

                                                   ಸ್ಟೆಲ್ಲಾಮಾರಿಸ್‌ ಚರ್ಚ್‌ ಕಲ್ಮಾಡಿ