ರೈತ ಭೂಮಿಯಾದರೆ ರೈತರಿಗೆ ಬಿಟ್ಟುಕೊಡಲು ಸರ್ಕಾರ ನಿಶ್ಚಯ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾಹಿತಿ

ಶ್ರೀನಿವಾಸಪುರ 2 : ಹೋರಾಟಗಳ ಮೂಲಕ ಸರ್ಕಾರದ ಗಮನಕ್ಕೆ ತಂದ ಮೇಲೆ ಸರ್ಕಾರ ಮಧ್ಯೆ ಪ್ರವೇಶಿಸಿ ಅರಣ್ಯ ಹಾಗು ಕಂದಾಯ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿ , ರೈತ ಭೂಮಿಯಾದರೆ ರೈತರಿಗೆ ಬಿಟ್ಟುಕೊಡಲು ಸರ್ಕಾರ ನಿಶ್ಚಿಯಿಸಲಾಯಿತು ಎಂದು ಎಂದು ಜಿಲ್ಲಾ ಅರಣ್ಯಣಾಧಿಕಾರಿ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾಹಿತಿ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರವರನ್ನ ಕೆಲಸದಿಂದ ವಜಾ ಮಾಡಬೇಕು ಹಾಗು ಕ್ರಿಮಿನಲ್ ಮೊಕದ್ದಮೆ ಹಾಕಿ ಬಂದಿಸಬೇಕೆಂದು ಸರ್ಕಾರಕ್ಕೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು.
ಜಿಲ್ಲಾ ಅರಣ್ಯಣಾಧಿಕಾರಿ ಏಡುಕೊಂಡಲು ರವರು ಇತ್ತೀಚಿಗೆ ತಾಲೂಕಿನ 97 ಗ್ರಾಮಗಳ 166 ಸವೇ ನಂಬರ್‍ಗಳಲ್ಲಿ ಇರತಕ್ಕಂತಹ 25 ಸಾವಿರ ಎಕರೆ ಭೂಮಿಯನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿ, ರೈತರ ಭೂದಾಖಲೆಗಳನ್ನು ಪರಿಶೀಲಿಸದೆ , ಸರ್ಕಾರ ಗಮನಕ್ಕೆ ತರದೆ , ಅರಣ್ಯ ಇಂಡೀಕರಣಕ್ಕಾಗಿ ರಾತ್ರೋತ್ರಿ ಕಾರ್ಯಾಚರಣೆ ನಡೆಸಿ ನೂರಾರು ಜೆಸಿಬಿ ಮೂಲಕ ಹಾಗೂ ನೂರಾರು ಪೊಲೀಸರ ಬಂದೊಬಸ್ತ್‍ನಲ್ಲಿ ಕಾರ್ಯಾಚರಣೆ ನಡೆಸುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು.
ಇಂತಹುದರಲ್ಲಿ 70 ವರ್ಷಗಳಿಂದ ಆ ಭೂಮಿಗಳಲ್ಲಿ ಕಷ್ಟಪಟ್ಟು ವ್ಯವಸಾಯ ಮಾಡಿ ಬೆಳಸಿದ ಮರಗಳನ್ನು ಜೆಸಿಬಿ ಮೂಲಕ ಕೆಡವಿಲಾಗಿದೆ. ಕಂದಾಯ ಇಲಾಖಾ ಅಧಿಕಾರಿಗಳಿಂದ ನಾವು ಸರ್ಕಾರದಿಂದ ಕಾನೂನು ರೀತ್ಯ ಪಹಣಿ ,ಪಟ್ಟ ಇತರೆ ಭೂದಾಖಲೆಗಳು ಇಲ್ಲವೂ ಪಡೆದಿದ್ದರು ಸಹ ರೈತರ ಭೂಮಿಯನ್ನು ಕಾರ್ಯಾಚರಣೆ ಮೂಲಕ ಬೆಳೆ ನಾಶಮಾಡುವುದು ಎಷ್ಟು ಸರಿ ಎಂದು ಪ್ರಶ್ನೆಸಿದರು. ಇದು ಸರಿಯಲ್ಲ ನಮ್ಮ ಬಳಿ ಕಂದಾಯ ಇಲಾಖೆಯು ನೀಡಿರುವ ಭೂ ದಾಖಲೆಗಳು ಇದೆ ಎಂದರು ತಿಳಿಸಿದರೂ ಭೂಮಿಯ ಒಳಗೆ ಪ್ರವೇಶ ಮಾಡಲು ಬಿಡಲಿಲ್ಲ ಹಾಗು ಹೈಕೋರ್ಟ್ ನಿಂದ ಸ್ಟೇ ಆರ್ಡರ್ ತಂದರು ಪರಿಗಣಿಸಲಿಲ್ಲ. ಎಂದರು.
ನಂತರ ಹೈಕೋರ್ಟ್ ಜಿಲ್ಲಾ ಸಂರಕ್ಷಣಾಧಿಕಾರಿಗೆ ಯಾವದೇ ದಾಖಲೆಗಳನ್ನು ಪ್ರಸ್ತುತ ಪಡಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‍ನ ನ್ಯಾಯದೀಶರು ಅಧಿಕಾರಿಗೆ ಛೀಮಾರಿಯನ್ನು ಹಾಕಿದೆ ಎಂಬುದಾಗಿ ಮಾಹಿತಿ ನೀಡಿದರು. ಅಲ್ಲದೆ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಬೇಕೆಂದು ಹೋರಾಟ ಸಮಿತಿಯು ಒತ್ತಾಯಿಸಲಾಗುತ್ತಿದೆ ಎನ್ನುತ್ತಾ, ಕೋರ್ಟ್‍ನಲ್ಲಿ ಕೇಸು ನಡೆಯುತ್ತಿದ್ದು, ಅರಣ್ಯ ಇಲಾಖೆಯಿಂದ ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಮಾಡಬಾರದು ಎಂದು ಎಚ್ಚರಿಸಿ, ಮುಂದಿನ ದಿನಗಳಲ್ಲಿ ನಮ್ಮ ಭೂಮಿ ನಮಗೆ ಕೊಡುವ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಪಾತಕೋಟೆ ನವೀನ್‍ಕುಮಾರ್ ಮಾತನಾಡಿ ಅರಣ್ಯ ಇಲಾಖೆಯು ರೈತರ ಜಮೀನನ್ನು ಅಕ್ರಮ ಕಾರ್ಯಚರಣೆಯಿಂದ ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ರೈತರಿಗೆ ವಾಪಸ್ಸು ಕೊಡಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಅರಣ್ಯ ಇಲಾಖೆಯಿಂದ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಎಚ್ಚರವಹಿಸಿಬೇಕೆಂದು ಒತ್ತಾಯಿಸಿದರು.
ಇದೇ ಸಮಯದಲ್ಲಿ ಪಟ್ಟಣದ ಅರಣ್ಯ ಇಲಾಖಾ ಕಛೇರಿಯಿಂದ ಅರಣ್ಯ ಅಧಿಕಾರಿಯ ವಿರುದ್ಧ ಘೋಷಣೆಗಳನ್ನು ಕೂಗಿ, ರ್ಯಾಲಿಯ ಮೂಲಕ ತಹಶೀಲ್ದಾರ್ ಕಛೇರಿ ಮುಂಭಾಗ ಧರಣಿ ನಡೆಸಿ, ಡಿಎಫ್‍ಓ ಏಡುಕೊಂಡಲು ರವರ ಬಾವಚಿತ್ರಕ್ಕೆ ಚಪ್ಪಲಿ ಹಾರವನ್ನು ಹಾಕಿ , ಬಾವಚಿತ್ರಕ್ಕೆ ಅಗ್ನಿಸ್ಪರ್ಶ ಮಾಡಿ ಹೋರಾಟಗಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎ.ಸೈಯದ್‍ಫಾರೂಕ್, ಬಗರ್ ಹುಕಂ ಸಾಗುವಳಿ ಹೋರಾಟ ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್.ವೆಂಕಟೇಶ್, ಸಹಕಾರ್ಯದರ್ಶಿ ಎನ್.ಮಂಜುಳ, ಹೋರಾಟ ಸಮಿತಿ ಸದಸ್ಯರಾದ ಕೇತಗಾನಹಳ್ಳಿ ನಾಗರಾಜ್, ಪಾಳ್ಯ ಗೋಪಾಲರೆಡ್ಡಿ, ಕೆ.ವಿ.ಆದಿರೆಡ್ಡಿ, ಪಾತಪಲ್ಲಿ ಚೌಡರೆಡ್ಡಿ, ಉಪ್ಪರಪಲ್ಲಿ ಗುಲ್ಜಾರ್‍ಪಾಷ, ಚಲಪತಿ, ನಾಗರಾಜ್, ಶಂಕರಪ್ಪ ಇದ್ದರು.