

ಶ್ರೀನಿವಾಸಪುರ 1 : .ಮುಖ್ಯಮಂತ್ರಿ, ಉಸ್ತವಾರಿ ಮಂತ್ರಿ, ತೋಟಗಾರಿಕೆ ಮಂತ್ರಿ ಯಾರು ಬರಲ್ಲ. ಇಂದು ರಾಜ್ಯ ಸರ್ಕಾರ ಮಾವುಬೆಳಗಾರ, ತೋಟಗಾರಿಕೆ ಬೆಳೆಗಾರರ, ರೈತರ ವಿರೋಧವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ನಾರಾಯಣ್ ವ್ಯಂಗ್ಯವಾಡಿದರು.
ಪಟ್ಟಣ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿನ ಕೋಹಿನೂರ್ ಟ್ರೇಡರ್ಸ್ ನಲ್ಲಿ ಗುರುವಾರ ಮಾವು ಬೆಂಬಲ ಬೆಲೆ ವಿಚಾರವಾಗಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ನಮ್ಮ ನಾಯಕರೊಂದಿಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು 1 ಟನ್ಗೆ 5ಸಾವಿರ ಬೆಂಬಲ ನೀಡುವಂತೆ ಒತ್ತಾಯ ಮಾಡಿ, ತಕ್ಷಣ ಬೆಂಬಲ ನೀಡುವಂತೆ ಒತ್ತಾಯಿಸುತ್ತೇವೆ , ಅಲ್ಲದೆ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಬೇಕಾಗಿರುವ ವ್ಯವಸ್ಥೆ ಮಾಡಲು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.
ತೋಟಗಾರಿಕೆ ಸಚಿವರು ಈ ಭಾಗಕ್ಕೆ ಪ್ರವಾಸವು ಮಾಡಿಲ್ಲ , ಈ ಭಾಗದ ರೈತರಿಗೆ ಸಚಿವರ ಪರಿಚಯವೂ ಇಲ್ಲ. ಎಂತಹ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಕೃಷಿಗಿಂತಲೂ, ತೋಟಗಾರಿಕೆ ಹೆಚ್ಚು ಇರುವುದು. ವಿಶ್ವದಲ್ಲಿ ತೋಟಗಾರಿಕೆಯೇ ಹೆಚ್ಚು ಅದರಲ್ಲಿ ವಿಶ್ವವಿಖ್ಯಾತ ಮಾವು ಬೆಳೆ ಹೆಚ್ಚು ಇಡೀ ದೇಶದಲ್ಲೇ ಶ್ರೀನಿವಾಸಪುರ ಮಾವು ಮಾರುಕಟ್ಟೆ ದೊಡ್ಡದಾಗಿದ್ದು, ದೇಶದ ಜನರಿಗೆ ಮಾವು ರುಚಿಯನ್ನು ಸವಿಯಲು ತಾಲೂಕಿನ ಮಾವು ಬೆಳೆಗಾರರು ಕಾರಣ. ಇಂತಹ ರ್ಯತರಿಗೆ ಮಾವು ಬೆಲೆಯಿಲ್ಲದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ನಾವು ನಿಮ್ಮೊಂದಿಗೆ ಇರುತ್ತೇವೆ ತಕ್ಷಣ 1 ಟನ್ಗೆ 5 ರೂ ಬೆಂಬಲ ಕೊಡುವವರಿಗೂ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಭರವಸೆ ನೀಡಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ಸರ್ಕಾರ ಹತ್ತು ದಿನಗಳವರೆಗೆ ಸಹಾಯ ಧನ ನೀಡಲೇಬೇಕು ಇಲ್ಲವಾದರೆ, ಏನು ಪ್ರಯೋಜನ ಎಂದು ನುಡಿದರು. ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದ ಮಂತ್ರಿಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾವು ಬೆಳೆಗೆ ಬೇಕಾದ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಇಂದಿನ ಸಚಿವ ಸಂಪುಟದಲ್ಲಿ ಮಾವು ಬೆಂಬಲ ಬೆಳೆ ನಿರ್ಧಾರವಾಗಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟಕ್ಕೆ ಸಿದ್ದವಾಗಬೇಕು ಎಂದು ಕೆರೆನೀಡಿದರು.
ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ ಇಡೀ ಪ್ರಪಂಚಕ್ಕೆ ಹಣ್ಣು ,ತರಕಾರಿ, ಹಾಲು ಕೊಡುತ್ತಿದ್ದರೂ ಸಹ ಯಾವುದೇ ಮಂತ್ರಿಗಳು ಜಿಲ್ಲೆಯತ್ತಾ ಗಮನಹರಿಸದೆ ಇರುವುದ ಬೇಸರದ ಸಂಗತಿ. ಇಂದು ಈ ಭಾಗದ ರೈತರಿಗೆ ಯಾವುದೇ ಶ್ವಾಶತವಾದ ನೀರಾವರಿ ಇಲ್ಲ ಆದರೂ ಕಷ್ಟ ಬಿದ್ದು, ಬೆಳೆ ತೆಗೆಯುತ್ತಾರೆ ಆದರೆ ಸರ್ಕಾರ ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದರು. ತಕ್ಷಣ ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್.ಮಾತನಾಡಿ ಸರ್ಕಾರ ತಕ್ಷಣ ರೈತರಿಗೆ ಬೆಂಬಲ ಬೆಲೆ ನೀಡಬೇಕು. ಸರ್ಕಾರ ಇಂತಹ ಸಮಯದಲ್ಲಿ ಸರ್ಕಾರ ಸಂಬಂದಪಟ್ಟ ಅಧಿಕಾರಿಗಳ ಸಲಹೆ ಸಹಕಾರ ಪಡೆದು ಮಾವಿನ ಹಣ್ಣುಗಳ ವಿವಿಧ ರೀತಿಯಲ್ಲಿ ಬಳಸಲು ಬೇಕಾದ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾ, ತಕ್ಷಣ ಮಾವು ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ರೋಣೂರು ಆರ್.ಎನ್.ಚಂದ್ರಶೇಖರ್, ಉಪಾಧ್ಯಕ್ಷ ನಾಗಭೂಷಣ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲ್, ಮಾಲೂರು ತಾಲೂಕು ಬಿಜೆಪಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಲಕ್ಷ್ಮಣಗೌಡ, ಚಂದ್ರಶೇಖರ್, ನಾಸೀರ್, ಈ.ಶಿವಣ್ಣ ಇದ್ದರು.
