ಶ್ರೀನಿವಾಸಪುರ: ಮುಸ್ಲಿಮರು ಮಂಗಳವಾರ ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಿಸಿದರು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮುಸ್ಲಿಮರು ಮಂಗಳವಾರ ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಿಸಿದರು. ಆಚರಣೆ ಸಂದರ್ಭದಲ್ಲಿ ಪರಸ್ಪರ ಅಪ್ಪಿ ರಂಜಾನ್ ಶುಭಾಶಯ ತಿಳಿಸಿದರು.
ಪ್ರಾರ್ಥನೆ ಮುಗಿದ ಬಳಿಕ ಪಟ್ಟಣದ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ವತಿಯಿಂದ ಮುಸ್ಲಿಮರಿಗೆ ತಂಪು ಪಾನೀಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ, ಮುಸ್ಲಿಮರು ಪರಸ್ಪರ ಶುಭ ಹಾರೈಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂಮರು ವಾಸವಾಗಿರುವ ಗೌನಿಪಲ್ಲಿ, ಅಡ್ಡಗಲ್, ಮುದಿಮಡಗು, ಯಚ್ಚನಹಳ್ಳಿ ಮತ್ತಿತರ ಕೆಲವು ಗ್ರಾಮಗಳಲ್ಲಿ ರಂಜಾನ್ ಆಚರಿಸಲಾಯಿತು. ಅಲ್ಲಿ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿ ಪ್ರಾರ್ಥನೆ ಮಾಡಲಾಯಿತು.