ಶ್ರೀನಿವಾಸಪುರ ಜೆಡಿಎಸ್‍ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣಿ ಡಾ|ಎಂ. ಗಾಯಿತ್ರಿ ಮುತ್ತಪ್ಪರವರ ಅಭಿಮಾನ ಬಳಗದಿಂದ ಹುಟ್ಟುಹಬ್ಬ

ಶ್ರೀನಿವಾಸಪುರ ಜೆಡಿಎಸ್‍ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣಿ ಡಾ|| ಎಂ. ಗಾಯಿತ್ರಿ ಮುತ್ತಪ್ಪ ರವರ ಮುಂದಿನ ರಾಜಕೀಯ ಜೀವನ ಯಶಸ್ವಿಯಾಗಲಿ ಸಾರ್ವಜನಿಕ ಸೇವೆಗಾಗಿ ಭಗವಂತ ಇನ್ನಷ್ಟು ಶಕ್ತಿ ಮತ್ತು ಆರೋಗ್ಯ ನೀಡಲಿ ಎಂದು ಜೆಡಿಎಸ್‍ನ ಯುವ ಮುಖಂಡ ಅಂಬೇಡ್ಕರ್ ಪಾಳ್ಯ ಸಿ. ರವಿ ತಿಳಿಸಿದರು.
ಪಟ್ಟಣದ ಪ್ರವಾಸ ಮಂದಿರದಲ್ಲಿ ಡಾ|| ಎಂ. ಗಾಯಿತ್ರಿ ಮುತ್ತಪ್ಪ ಅಭಿಮಾನ ಬಳಗದಿಂದ ಏರ್ಪಡಿಸಿದ್ದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಸಿ.ರವಿ ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ತಮ್ಮ ಕೈಯಲಾದಷ್ಟು ಬಡವರಿಗೆ, ಮಹಿಳೆಯರಿಗೆ ಸಹಾಯವನ್ನು ಮಾಡಿ ಕ್ಷೇತ್ರಾದ್ಯಾಂತ ತಮ್ಮ ಹೆಸರನ್ನು ಜನರ ಮನದಾಳದಲ್ಲಿ ಸಂಪಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನ ಉತ್ತಮವಾಗಲಿ ಭಗವಂತ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಡಾ|| ಗಾಯಿತ್ರಿ ಮುತ್ತಪ್ಪ ಅಭಿಮಾನ ಬಳಗದಿಂದ ಬೃಹತ್ ಹಾರ ಹಾಗೂ ಕೇಕ್‍ನ್ನು ಕತ್ತರಿಸಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಅಚರಿಸಿದರು. ಹುಟ್ಟು ಹಬ್ಬಕ್ಕೆ ಬಂದಂತಹ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿದರು.