ಶ್ರೀನಿವಾಸಪುರ ಬಿಇಒ ಕಚೇರಿ ಸೋರುತ್ತಿದ್ದು ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಬಿಇಒ ಕಚೇರಿ ಸೋರುತ್ತಿದ್ದು , ಸಿಬ್ಬಂದಿ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ . ಇಕ್ಕಟ್ಟಾದ ಕಚೇರಿಯಲ್ಲಿ ಕಪಾಟುಗಳ ಮೇಲೆ ಇಡಲಾಗಿರುವ ವಿವಿಧ ಕಡತಗಳು ನೆನೆದು ಮುದ್ದೆಯಾಗಿವೆ . ದೊಡ್ಡ ಪ್ರಮಾಣದಲ್ಲಿ ಸೋರುತ್ತಿರುವ ನೀರು ಬೀರುಗಳ ಬಿರುಕಲ್ಲಿ ಪ್ರವೇಶಿಸಿ ಒಳಗಿಡಲಾಗಿರುವ ಕಡತಗಳನ್ನು ಒದ್ದೆ ಮಾಡಿದೆ . ‘ ಸತತ ಮಳೆಯಿಂದಾಗಿ ಕಚೇರಿಯ ಎಲ್ಲ ಭಾಗ ಸೋರುತ್ತಿರುವುದರಿಂದ , ಕಾರ್ಯನಿರ್ವಹಣೆ ಕಷ್ಟವಾಗಿದೆ . ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಲಾಗಿದೆ . ಸದ್ಯಕ್ಕೆ ಪುರಸಭೆ ಹಳೆ ಕಟ್ಟದಲ್ಲಿ ಕಚೇರಿ ನೀಡುವಂತೆ ಮನವಿ ಮಾಡಲಾಗಿದೆ ‘ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಕಮಾದೇವಿ ಹೇಳಿದರು .