

ಶ್ರೀನಿವಾಸಪುರ : ನೆರೆಯ ರಾಜ್ಯಗಳಲ್ಲಿ ಮಾವು ಬೆಳೆಗೆ 12 ಸಾವಿರ ಬೆಂಬಲ ಬೆಲೆ ನೀಡಿದ್ದು, ಅದರಂತೆ ನಮಗೂ ಸರ್ಕಾರ ಬೆಂಬಲ ನೀಡಲಿ ಎಂದು ಒತ್ತಾಯಿಸಿದರು. ಎರಡು ಮೂರು ದಿನಗಳಲ್ಲಿ ಬೆಂಬಲ ಬೆಲೆ ಘೋಷಣೆ ಆಗದ ಪಕ್ಷದಲ್ಲಿ ಸೋಮವಾರ ದಿಂದ ಕೋಲಾರ ಜಿಲ್ಲೆಯಾದ್ಯಂತ ಅರ್ನಿಧಿಷ್ಟ ಕಾಲ ಬಂದ್ ಕರೆ ನೀಡುತ್ತೇವೆ ಎಂದು ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮಾವು ಬೆಳೆಗೆ ಬೆಂಬಲ ಬೆಲೆಯನ್ನು ಆಗ್ರಹಿಸಿ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು ಒಂದುವರೇ ಲಕ್ಷ ಹೆಕ್ಟೇರ್ ಮಾವು ತೋಟಗಳು ಇದ್ದು ಅದರಲ್ಲಿ ಕೋಲಾರ ಜಿಲ್ಲೆಯಲ್ಲಿ 50 ಲಕ್ಷ ಹೆಕ್ಟೇರ್ ಇದೆ.ಅದರಲ್ಲಿ ಅತಿ ಹೆಚ್ಚು ತಾಲೂಕಿನಲ್ಲಿ ಇದೆ. ರಾಜ್ಯದಲ್ಲಿ 15 ಲಕ್ಷ ಟನ್ ಮಾವು ಬೆಳೆಯುತ್ತದೆ ಅದರಲ್ಲಿ 10ಲಕ್ಷ ಕೋಲಾರ ಜಿಲ್ಲೆಯಲ್ಲಿ ಬೆಳದರೆ, ಶ್ರೀನಿವಾಸಪುರ ತಾಲೂಕಿನಲ್ಲಿ 5ಲಕ್ಷ ಟನ್ ಬೆಳೆಯಲಾಗುತ್ತದೆ.
ಆದರೂ ಸಹ ಇಲ್ಲಿ ಬೆರಳಿಣಿಕೆಯಷ್ಟು ಸಂಸ್ಕಾರ ಘಟಕಗಳು ಇದ್ದು, ಈ ಭಾಗಕ್ಕೆ ಹತ್ತರಿಂದ ಹದಿನೈದು ತಿರಳು ತೆಗಯುವ ಪ್ಯಾಕ್ಟರಿಗಳು, ಹೈಟೆಕ್ ಮಾವು ಸಂಸ್ಕರಣ ಘಟಕಗಳು , 15 ಉಪ್ಪಿಕಾಯಿ ಪ್ಯಾಕ್ಟರಿಗಳ ಬೇಕಾಗಿದೆ ಎಂದು ಬೇಡಿಕೆಯನ್ನು ಸರ್ಕಾರಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು. ಈಗಾಗಲೇ 15 ದಿನಗಳಿಂದ ಹಂಗಾಮ ಪ್ರಾರಂಭವಾಗಿದೆ ತಕ್ಷಣ ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿರವರು ಕಳೆದ ನಾಲ್ಕು ದಿನಗಳ ಹಿಂದೆ ವರ್ಗಾವಣೆ ಆಗುತ್ತಾರೆ, ಕೋಟಿಗಟ್ಟಲೇ ವ್ಯವಾಹಾರ ನಡೆಯುವಾಗ ಎಪಿಎಂಸಿ ಮಾರುಕಟ್ಟೆಗೆ ಖಾಯಂ ಕಾರ್ಯದರ್ಶಿ ಇಲ್ಲವೆಂದರೆ ಏನು ಅರ್ಥ.ಜಿಲ್ಲಾಡಳಿತಕ್ಕೆ ಅಥವಾ ಸರ್ಕಾರಕ್ಕೆ ಇಂತಹವುಗಳನ್ನು ಶೀಘ್ರವಾಗಿ ಗಮನಹರಿಸಬೇಕಾಗಿದೆ .
ಉಪ ವಿಭಾಗಾಧಿಕಾರಿ ಡಾ.ಮೈತ್ರಿ ರೈತರ ಸಮಸ್ಯೆಗಳನ್ನು ಆಲಿಸಿ ನಾವು ಸರ್ಕಾರಕ್ಕೆ ಮಾವು ಬೆಂಬಲ ಬೆಲೆಯನ್ನು ನೀಡುವಂತೆ ಒತ್ತಾಯಿಸಿದ್ದು, ಜಿಲ್ಲಾಡಳಿತ ಪರವಾಗಿ ನಾನು ಬಂದಿದ್ದೇನೆ. ಮಾವು ಬೆಳೆಗಾರರು ಬೆಳೆಗೆ ಏನು ಖರ್ಚು ಮಾಡುತ್ತಿದ್ದಾರೆ ಕನಿಷ್ಟ ಪಕ್ಷ ಖರ್ಚು ಆದ ಹಣವಾದರೂ ಬರಲಿ ಎಂದು ಬೇಡಿಕೆ ಇಟ್ಟಿದ್ದು, ರೈತರ ಮನವಿಯನ್ನು ಆಲಿಸಿದ್ದು , ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ, ಬೇಡಿಕೆಗಳನ್ನು ಸಕರಾತ್ಮವಾಗಿ ಈಡೇರಿಸುತ್ತದೆ ಎಂದು ಆಶ್ವಾಸನೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ತೋಟಗಾರಿಕೆ ಜಿಲ್ಲಾ ಉಪನಿರ್ದೇಶಕ ಎಸ.ಆರ್.ಕುಮಾರಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಎಪಿಎಂಸಿ ಕಾರ್ಯದರ್ಶಿ ಎಚ್.ಹರೀಶ್, ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀರಾಮರೆಡ್ಡಿ, ರೈತ ಮುಖಂಡರಾದ ಬೈರಾರೆಡ್ಡಿ, ಸೈಯದ್ಫಾರುಕ್, ಅಸ್ಲಂ, ಎಫ್ಎ.ರಮೇಶ್, ಪ್ರಭಾಕರಗೌಡ, ಬಚ್ಚೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲ್, ಮಾವು ಮಂಡಿಗಳ ಯೂನಿಯನ್ ಅಧ್ಯಕ್ಷ ಅಕ್ಬರ್ ಶರೀಪ್, ಮಂಡಿಗಳ ಮಾಲೀಕರಾದ ಮುಜ್ಮಿಲ್ಉಲ್ಲಾಖಾನ್, ಜಾಯಿದ್ಅನ್ಸಾರಿ, ಅನ್ಸೀಸ್ ಅಹ್ಮದ್, ಸನ್ಶಿಫ್ ಪ್ಯಾಕ್ಟರಿ ವ್ಯವಸ್ಥಾಪಕ ರಮಣ, ಆರ್.ಕೆ.ಜ್ಯೂಸ್ಪ್ಯಾಕ್ಟರಿ ವ್ಯವಸ್ಥಾಪಕ ಮಂಜುನಾಥರೆಡ್ಡಿ ಇದ್ದರು.