

ಶ್ರೀನಿವಾಸಪುರ : ಬುದ್ದಪೂರ್ಣಿಮೆಯ ಬುದ್ಧನ ಎಲ್ಲಾ ಜೀವಿಗಳ ಬಗ್ಗೆ ಕರಣೆ ಮತ್ತು ದಯೆಯ ಭೋದನೆಗಳನ್ನು ಪ್ರತಿಬಿಂಬಿಸುವ ಸಮಯ ಇದಗಾಗಿದೆ.ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಕರ್ನಾಟಕ ದಲಿತ ಬುದ್ದ ಸೇನೆ ವತಿಯಿಂದ ಬುದ್ದ ಪೂರ್ಣಿಮಾ ಅಂಗವಾಗಿ ಬುದ್ದೋತ್ಸವ ಮತ್ತು ಭೀಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಲವು ಬೌದ್ಧರು ಬುದ್ದ ಪೂರ್ಣಿಮೆಯಂದು ಶುದ್ಧೀಕರಣ ಮತ್ತು ಸ್ವಯಂ ಶಿಸ್ತಿನ ಒಂದು ರೂಪವಾಗಿ ಉಪವಾಸವನನ್ನು ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ. ಬುದ್ದರವರ ಜೀವನ ಶೈಲಿ ಹಾಗು ಸಿದ್ದಾಂತಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಡಾ. ಬಿ.ಆರ್.ಅಂಬೇಡ್ಕರ್ ರವರು ಹಿಂದು ಧರ್ಮದಿಂದ ಭೌದ್ಧ ಧರ್ಮಕ್ಕೆ ಮಾತಾಂತಗೊಂಡು ಬುದ್ಧನ ಅನುಯಾಯಿಗಳಾದರು. ನಾವೆಲ್ಲರೂ ಬುದ್ಧನ ಆದರ್ಶ, ತತ್ವಗಳನ್ನು ನಮ್ಮ ಜೀವನಶೈಲಿಗೆ ಅನ್ವಯಿಸಿಕೊಳ್ಳಬೇಕು ಎಂದರು.
ಕರ್ನಾಟಕ ದಲಿತ ಬುದ್ದ ಸೇನೆ ಸಂಸ್ಥಾಪಕ, ರಾಜ್ಯಾಧ್ಯಕ್ಷ ವರ್ತನಹಳ್ಳಿ ವೆಂಕಟೇಶ್ ಮಾತನಾಡಿ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ನೇಮಿಸಿ, ಪದಾಧಿಕಾರಿಗಳು ಸಂಘಟನೆ ಹಾಗು ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ಸೂಚಿಸಿದರು.

ದಲಿತ ಮುಖಂಡ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ರೈತ ಮುಖಂಡ ಪ್ರಭಾಕರಗೌಡ, ಗಾಂಡ್ಲಹಳ್ಳಿ ಚಲಪತಿ ಮಾತನಾಡಿದರು. ದಲಿತ ಮುಖಂಡ ಚಲ್ದಿಗಾನಹಳ್ಳಿ ಈರಪ್ಪ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಬಂಡಪಲ್ಲಿ ಶ್ರೀನಿವಾಸ್, ತಾಲೂಕು ಪ್ರಧಾನ ಸಂಚಾಲಕ ಚೊಕ್ಕನಹಳ್ಳಿ ನಾರಾಯಣಸ್ವಾಮಿ, ಗೌರವಾಧ್ಯಕ್ಷ ಕಿರುವಾರ ಶ್ರೀರಾಮಯ್ಯ, ಉಪಾಧ್ಯಕ್ಷ ಗುಲ್ಲಕುಂಟೆ ವೆಂಕಟೇಶ್, ಸಂಘಟನಾ ಸಂಚಾಲಕ ನಾಗದೇನಹಳ್ಳಿ ಜಯರಾಮ್, ಖಜಾಂಚಿ ಕೊಡಿಚೆರವು ವೆಂಕಟೇಶ್, ಸಂಘನಾ ಕಾರ್ಯದರ್ಶಿಗಳಾದ ಬಂಡಪಲ್ಲಿ ಆಂಜಪ್ಪ, ಶಿಗೇಹಳ್ಳಿ ವೆಂಕಟರಮಣ, ಆಲವಾಟ ಮಂಜುನಾಥ್, ಬಂಡಪಲ್ಲಿ ನರೇಂದ್ರ , ವರ್ತನಹಳ್ಳಿ ಚಿನ್ನಸ್ವಾಮಿ ಇದ್ದರು.