ಶ್ರೀನಿವಾಸಪುರ ಶಾಖೆ ಶೃಂಗೇರಿ ಶಂಕರಮಠದಲ್ಲಿ ಶಂಕರಾಚಾರ್ಯರ ಮೂಲ ಮೂರ್ತಿಗೆ ಏಕವಾರ ರುದ್ರಾಭಿಷೇಕ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಶ್ರೀನಿವಾಸಪುರ ಶಾಖೆಯ ಶೃಂಗೇರಿ ಶಂಕರಮಠದಲ್ಲಿ ಗರುವಾರ ಜಗದ್ಗುರುಗಳಾದ ಶ್ರೀಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿ 72ನೇ ವರ್ಧಂತಿ ಮಹೋತ್ಸವವದ ಅಂಗವಾಗಿ ಶಂಕರಾಚಾರ್ಯರ ಮೂಲ ಮೂರ್ತಿಗೆ ಏಕವಾರ ರುದ್ರಾಭಿಷೇಕ, ಮಂಗಳಸತ್ಯಮೂರ್ತಿ,ಆಶಾರವಿಕುಮಾರ್ ತಂಡದವತಿಯಿಂದ ಸಹಸ್ರನಾಮ ಕುಂಕುಮಾರ್ಚನೆ ಮಹಾಮಂಗಳಾರತಿ ನಡೆಯಿತು.
ಶಂಕರಮಠದ ನಿರ್ದೇಶಕರಾದ ಶ್ರೀನಿವಾಸ್,ಮಂಜುನಾಥ್,ಅರ್ಚಕ ಸುಬ್ರಮಣ್ಯ,ಕೃಷ್ಣ,ಕುರುಮಾಕಲಪಲ್ಲಿ ಪ್ರಕಾಶ್,ರಾಘವೇಂದ್ರ,ನಾಗೇಂದ್ರ ಹಾಗು ಇತರರು ಇದ್ದರು.