

ಶ್ರೀನಿವಾಸಪುರ : ಪಟ್ಟಣದ ಬೇಕರಿಗಳು , ಹೋಟೆಲ್ಗಳು , ದಿನಸಿ ಅಂಗಡಿಗಳ ಮೇಲೆ ಆಹಾರ ಸುರಕ್ಷಿತ ಮತ್ತು ನಿಯಂತ್ರಣ ಇಲಾಖೆ ಹಾಗು ಪುರಸಭೆ ವತಿಯಿಂದ ನಡೆದ ಜಂಟಿ ಕಾರ್ಯಚರಣೆ ಜಿಲ್ಲಾ ಅಂಕಿತ, ಆಹಾರ ಸುರಕ್ಷಿತ ಮತ್ತು ಔಷಧಿ ಆಡಳಿತ ಅಧಿಕಾರಿ ಡಾ|| ರಾಕೇಶ್ ನಡೆಸಿ ಮಾತನಾಡಿದರು.
ಪಟ್ಟಣದಲ್ಲಿ 9 ಕಡೆ ಕಾರ್ಯಾಚರಣೆ ನಡೆಸಿ, ಕೆಲವಡೆ ಲಿಮ್ರರಾ ಫ್ರೆಷ್ ,ಎಂಪಿ ಕಂಪನಿಗಳ ಮಿನಿರಲ್ ಬಾಟಲ್ಗಳು ಕುಡಿಯಲು ಯೋಗ್ಯವಿಲ್ಲದಿರುವ ನಮಗೆ ದೂರಬಂದಿದ್ದು, ಎರಡು ಕಂಪನಿಗಳ ಬಾಟಲ್ಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಪಟ್ಟಣದಲ್ಲಿನ ಕೆಲ ಬೇಕರಿಗಳಲ್ಲಿ ಬಣ್ಣ ಬಳಿಸಿರುವುದು ಸಾಬೀತಾಗಿ ನೋಟಿಸ್ ನೀಡಿ 2 ಸಾವಿರ ದಂಡವನ್ನು ವಿಧಿಸಲಾಯಿತು. ಕೆಲ ಚಾಟ್ಸ್ ಅಂಗಡಿಗಳು ಪರವಾನೆಯನ್ನು ಪಡೆಯದೆ ನಡೆಸುತ್ತಿದ್ದು, ನೋಟಿಸ್ ನೀಡಿ ಒಂದು ಸಾವಿರ ದಂಡ ವಿಧಿಸಲಾಯಿತು. ಚಿಂತಾಮಣಿ ರಸ್ತೆಯ ಅನ್ಸಾರಿ ದಿನಸಿ ಅಂಗಡಿಯ ಪರವಾನೆಯನ್ನು ಹೊಂದಿಲ್ಲ . ಈ ಅಂಗಡಿಯಲ್ಲಿ ಬಕೀಟ್ಗಟ್ಟಲ್ಲೇ ಟೇಸ್ಟೀಂಗ್ ಪೌಡರ್, ಬಣ್ಣ ಮಿಶ್ರಿತ ಬೋಟಿಗಳು , ಪ್ಲಾಸ್ಟಿಕ್ ಚೀಲಗಳು ಇದ್ದವು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಪುರಸಭೆ ಹಾಗು ನಮ್ಮ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಸರ್ಕಾರಿ ಕೆಲಸಕ್ಕೆ ಅಂಗಡಿ ಮಾಲೀಕ ಅಡ್ಡಿಪಡಿಸಿದರು. ಅಲ್ಲದೆ ನಮ್ಮ ಮೇಲೆ ದಾಳಿ ನಡೆಸಲು ಬಂದ ಹಿನ್ನೆಲೆಯಲ್ಲಿ ನಮ್ಮ ಇಲಾಖೆ ಹಾಗು ಪುರಸಭೆ ವತಿಯಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಠಾಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಾಲೀಕರಿಗೆ ನೋಟಿಸ್ ನೀಡಿ, ಒಟ್ಟಾರೆ 9,500 ದಂಡ ವಿಧಿಸಲಾಯಿತು. ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಜಿಲ್ಲೆಯಾದ್ಯಾಂತ ಜಂಟಿ ಕಾರ್ಯಾಚರಣೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ನಾಗಮಣಿ, ಪುರಸಭೆ ವ್ಯವಸ್ಥಾಪಕ ನವೀನ್ಚಂದ್ರ, ಆರೋಗ್ಯ ಅಧಿಕಾರಿ ಟಿ.ವಿ.ಸುರೇಶ್, ಸಿಬ್ಬಂದಿ ಚಂದ್ರು ಇದ್ದರು.