

ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೃಷಿ ವೆಚ್ಚ , ನಕಲಿ ಉತ್ಪನ್ನಗಳು, ಹವಮಾನ ಬದಲಾವಣೆ, ನಿರೋಧಕ ಕೀಟಗಳ ಹಿನ್ನೆಲೆಯಲ್ಲಿ ರೈತರು ನಷ್ಟವನ್ನು ಅನುಭವಿಸುತ್ತಿದ್ದಾನೆ ಎಂದು ಕ್ಯಾಪ್ಸ್ಬರ್ ಅಗ್ರಿ ಸೈನ್ಸ್ ಕಂಪನಿ ಅಧ್ಯಕ್ಷ ಡಾ. ಗವಾಸ್ಕರ್ ಹೇಳಿದರು.
ತಾಲೂಕಿನ ಕಾಕಿನತ್ತ ಗ್ರಾಮದ ಸಪ್ಪಲಮ್ಮ ದೇವಿ ಆವರಣದಲ್ಲಿ ಸೋಮವಾರ ರೈತರಿಗೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಗ್ರಬೆಳೆಯ ಅರಿವು ಮೂಡಿಸಿದರು. ಸಾವಯವ ಬೆಳೆಗಳನ್ನು ಬೆಳೆಯಲು ಬೇಕಾದ ಮಾಹಿತಿ ನೀಡಿದರು. ರೈತರು ಬೆಳೆಗಳನ್ನು ಬೆಳೆಯುವ ಮುನ್ನ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿಬೇಕು. ಕಾಲಕಾಲಕ್ಕೆ ತಕ್ಕಂತೆ ಔಷಧಿಯನ್ನು ಸಿಂಪಡಣೆ ಮಾಡಬೇಕು ಎಂದರು.
ಕ್ಯಾಪ್ಸ್ಬರ್ ಆಗ್ರಿಸೈನ್ಸ್ ಒಂದು ಸಮರ್ಥನೀಯ ಮಣ್ಣಿನ ಆರೋಗ್ಯ ಮತ್ತು ಸಸ್ಯ ಸಂರಕ್ಷಣಾ ಕಂಪನಿಯಯಾಗಿದ್ದು, ಕ್ಯಾಪ್ಸ್ಬರ್ ಕಂಪನಿಯು ಆರ್ಗ್ಯಾನಿಕ್ ಔಷಧಿ ಆಗಿರುತ್ತದೆ. ಬೇರೆ ಕಂಪನಿಗಳಿಗಿಂತ ಈ ಕಂಪನಿಯಿಂದ ತಯಾರಾಗುವ ಔಷದಿ ಉತ್ತಮವಾಗಿ ಪರಿಹಾರ ಸಿಗುತ್ತದೆ. ಬೆಳೆಯು ಉತ್ತಮ ಫಸಲು ನೀಡುತ್ತದೆ ಇದರಿಂದ ಆರ್ಥಿಕಾಗಿ ಸಭಲರಾಗಲು ಸಾಧ್ಯವಾಗುತ್ತದೆ.
ಕ್ಯಾಪ್ಸ್ಬರ್ ಕಂಪನಿಯು ರೈತರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಔಷದಿ ನೀಡುತ್ತಿದೆ. ಗ್ರಾಮೀಣ ಭಾಗದ ರೈತರು ಅಕ್ಕಪಕ್ಕದ ಜಮೀನಿನ ರೈತರ ಬೆಳೆಗಳಿಗೆ ಬೇರೆ ಕಂಪನಿಗಳ ಔಷದಿ ಸಿಂಪಡಣೆ ಮಾಡಿರುವುದಕ್ಕೂ ನಮ್ಮ ಕಂಪನಿಯ ಔಷದಿಯನ್ನು ಬೆಳೆಗಳಿಗೆ ಸಿಂಪಡಣೆ ಮಾಡಿರುವ ಫಲಿತಾಂಶಕ್ಕೂ ವ್ಯತ್ಯಾಸವನ್ನು ಗಮನಿಸಿ ಎಂದರು.
ಸಂಪನ್ಮೂಲ ವ್ಯಕ್ತಿ ಕೆ.ಎನ್.ಸುರೇಶ್ಕುಮಾರ್ ಮಾತನಾಡಿ ಗ್ರಾಮೀಣ ಭಾಗದ ರೈತರು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಕ್ಯಾಪ್ಸ್ಬರ್ ಕಂಪನಿಯ ಔಷದಿಯು ಆರ್ಗ್ಯಾನಿಕ್ ಔಷದಿಯಾಗಿದ್ದು, ನಿಮ್ಮ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಗಣಮಟ್ಟದ ಫಸಲುನೊಂದಿಗೆ ಉತ್ತಮ ಫಸಲು ಬರಲು ಸಾಧ್ಯವಾಗುತ್ತದೆ ಎಂದರು.
ಕಂಪನಿಯ ಪದಾಧಿಕಾರಿಗಳಾದ ಪ್ರೀತಿ, ಮನೋಜ್, ಎನ್ಜಿಒ ಪ್ರಶಾಂತ್, ಸಂಸ್ಥೆ ಸಿಬ್ಬಂದಿಗಳಾದ ಮುನೀಂದ್ರ, ರಾಜೇಶ್ , ರೈತರಾದ ವೀರಭದ್ರರೆಡ್ಡಿ, ನಿತಿನ್ , ಸಂತೋಷ್, ಮಂಜುನಾಥ್ ಇದ್ದರು.