ಶ್ರೀನಿವಾಸಪುರ:ತಾಲ್ಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನ

ಶ್ರೀನಿವಾಸಪುರದ ಅಂಬೇಡ್ಕರ್ ವಸತಿ ಶಾಲೆ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಟಿ.ವಿ.ವೆಂಕಟೇಶಪ್ಪ, ತರಬೇತುದಾರ ವಿ.ನಾರಾಯಣಸ್ವಾಮಿ, ಶಿಕ್ಷಕರಾದ ಕೆ.ಎನ್.ವೆಂಕಟರವಣ, ರಘುನಾಥ್, ನಾಗರಾಜ್, ಲಕ್ಷ್ಮಯ್ಯಗೌಡ, ಚಿಕ್ಕರೆಡ್ಡಪ್ಪ, ಮನೋಜ್, ಪ್ರತಿಮಾ ಇದ್ದರು.