

ಶ್ರೀನಿವಾಸಪುರದ ಅಂಬೇಡ್ಕರ್ ವಸತಿ ಶಾಲೆ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಟಿ.ವಿ.ವೆಂಕಟೇಶಪ್ಪ, ತರಬೇತುದಾರ ವಿ.ನಾರಾಯಣಸ್ವಾಮಿ, ಶಿಕ್ಷಕರಾದ ಕೆ.ಎನ್.ವೆಂಕಟರವಣ, ರಘುನಾಥ್, ನಾಗರಾಜ್, ಲಕ್ಷ್ಮಯ್ಯಗೌಡ, ಚಿಕ್ಕರೆಡ್ಡಪ್ಪ, ಮನೋಜ್, ಪ್ರತಿಮಾ ಇದ್ದರು.