ಕುಂದಾಪುರ ರೋಜರಿ ಕ್ರೆ.ಕೋ.ಆ.ಸೊಸೈಟಿಯ ಉದ್ಯೋಗಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಗಾರ

ಕುಂದಾಪುರ, ಸೆ.9:  ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಎಂಟು ಶಾಖೆಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗಾಗಿ ಕೌಶಲ್ಯ ಅಭಿವೃದ್ಧಿ,  ದಕ್ಷತೆ, ಹಾಗೂ ಗ್ರಾಹಕರ ಸಂಬಂಧ ಕಾರ್ಯಾಗಾರ ನಡೆಯಿತು. ಹೋಟೆಲ್ ಶಿವಪ್ರಸಾದ್ ಗ್ರಾಂಡ್ ನ ಸಭಾಂಗಣದಲ್ಲಿ ನಡೆದ ಈ ಕಾರ್ಯಗಾರವನ್ನು ಸಂಸ್ಥೆಯ ಮಾರ್ಗದರ್ಶಕರಾದ ಅತೀ ವಂದನೀಯ ಸ್ಟ್ಯಾನಿ ತಾವ್ರೋ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.  ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ರೋಟೇರಿಯನ್ ಪಿ. ಡಿ. ಜಿ. ಅಭಿನಂದನ್ ಶೆಟ್ಟಿ, ಹೋಟೆಲ್ ಉದ್ಯಮಿ, ಕುಂದಾಪುರ. ವಾಸುದೇವ ಕಾರಂತ್,  ಸಿಂಡಿಕೇಟ್ ಬ್ಯಾಂಕ್  ನಿವ್ರತ್ತ ಸೀನಿಯರ್ ಮ್ಯಾನೇಜರ್,  ಟಿ. ಬಿ. ಶೆಟ್ಟಿ  ಹಿರಿಯ ವಕೀಲರು ಕುಂದಾಪುರ,  ಪ್ರಭು ಕೆನಡಿ ಪಿರೇರಾ ಉದ್ಯಮಿ, ಆಗಮಿಸಿ ಸಂಸ್ಥೆಯ ಬೆಳವಣಿಗೆಗೆ  ಗ್ರಾಹಕರ ಜೊತೆ ಸಂಬಂಧ, ಕಾನೂನು ಮಾಹಿತಿ,  ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಉದ್ಯೋಗಿಗಳಿಗಾಗಿ ಉಪಯುಕ್ತ ಆಗಿದ್ದ  ಈ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ  ಜಾನ್ಸನ್ ಡಿ ಅಲ್ಮೇಡಾ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷ  ಕಿರಣ್ ಮೇಲ್ವಿನ್ ಲೋಬೊ,  ನಿರ್ದೇಶಕರಾದ  ಫಿಲಿಪ್ ಡಿ ಕೋಸ್ತ,  ಒಜ್ಲಿನ್ ರೇಬೆಲ್ಲೊ ಹಾಗೂ ಇನ್ನಿತರ ನಿರ್ದೇಶಕರು ಭಾಗವಹಿಸಿದ್ದರು.