ಪಾಂಡೇಶ್ವರ ಸೂಲ್ಕುದ್ರು ಪರಿಸರದಲ್ಲಿ ಶ್ರಮದಾನ “ನಮ್ಮ ಗ್ರಾಮ ಸ್ವಚ್ಛಗ್ರಾಮ” ಗ್ರಾಮ ನೈರ್ಮಲ್ಯ ಸ್ವಚ್ಚತಾ ಕಾರ್ಯಕ್ರಮ

ಬ್ರಹ್ಮಾವರ : 02/10 2023 ರಂದು 3ನೇ ಪಾಂಡೇಶ್ವರ ಗ್ರಾಮ ಪಂಚಾಯತ್ ಬ್ರಹ್ಮಾವರ ತಾಲ್ಲೂಕ್ ಇದರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೂಲ್ಕುದ್ರು ಪರಿಸರದಲ್ಲಿ ಶ್ರಮದಾನದ ಮೂಲಕ “ನಮ್ಮ ಗ್ರಾಮ ಸ್ವಚ್ಛಗ್ರಾಮ” ಗ್ರಾಮ ನೈರ್ಮಲ್ಯ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು
ಈ ಸಂದರ್ಭದಲ್ಲಿ ಪಾಂಡೇಶ್ವರ ಪಂಚಾಯತ್ ಅಧ್ಯಕ್ಷರು ಶ್ರೀಮತಿ.ಸುಶೀಲಾ ಸದಾನಂದ ಪೂಜಾರಿ. ಉಪಾಧ್ಯಕ್ಷರು ವೈ.ಬಿ. ರಾಘವೆಂದ್ರ. ಪಿ. ಡಿ. ಓ ಲೋಲಾಕ್ಷಿ ಮತ್ತು ಕಾರ್ಯದರ್ಶಿ ವಿಜಯ. ಗ್ರಾಮ ಹಿತ ರಕ್ಷಣಾ ಸಮಿತಿ ಅಧ್ಯಕ್ಷರು ಶ್ರೀ ಜೇಮ್ಸ್ ಒಲ್ವೆರಾ. ಕಾರ್ಯದರ್ಶಿ ಶ್ರೀ ಎಲ್ಯಾಸ್ ಒಲ್ವೆರಾ ರವರು.ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶೇಷನ್ (ರಿ) ಕರ್ನಾಟಕ. ಸಂತ ಆಂತೋನಿ ದೇವಾಲಯ ಸಾಸ್ತಾನ ಘಟಕ ಇವರ ಅಧ್ಯಕ್ಷರು ಶ್ರೀವಿಜಯ್ ಲೂವಿಸ್ ರವರು ಮತ್ತು ಸ್ವ ಸಹಾಯ ಸಂಘಗಳ ಅಧ್ಯಕ್ಷರು ಶ್ರೀಮತಿ ಮೇಬಲ್ ಡಿ ಸೋಜ ಸ್ಟ್ಯಾನಿ ಡಿ. ಅಲ್ಮೇಡಾ. ತೆರೇಸಾ ಒಲ್ವೇರಾ ಹಾಗೂ ಗ್ರಾಮಸ್ಥರು ಸುಮಾರು ಎಪ್ಪತ್ತು ಮಂದಿ ಭಾಗವಹಿಸಿ ರಸ್ತೆಯ ಪಕ್ಕದ ಹುಲ್ಲುಗಿಡಗಳನ್ನು ಕತ್ತರಿಸಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು.