ಶಿರ್ವ ಸಂತ ಮೇರಿ ಪ.ಪೂ.ಕಾಲೇಜ್ “ಆತ್ಮಹತ್ಯೆ ತಡ’ ಗಟ್ಟುವ ದಿನಾಚರಣೆ

ಶಿರ್ವ; ದಿನಾಂಕ 27.09.2023ರಂದು ಶಿರ್ವ ಸಂತ ಮೇರಿ ಪ.ಪೂ.ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಹಾಗೂ
ಎನ್‌. ಎಸ್‌.ಎಸ್‌, ಘಟಕ ಇದರ ಜಂಟಿ ಆಶ್ರಯದಲ್ಲಿ “ವಿಶ್ವ ಆತ್ಮಹತ್ಯೆ ತಡೆ” ಗಟ್ಟುವ ದಿನಾಚರಣೆಯನ್ನು ಪಿಯಸಿ
ವಿದ್ಯಾರ್ಥಿಗಳಿಗೆ “ಸಾವುದ್‌ ಸಭಾ ಭವನ” – ಶಿರ್ವದಲ್ಲಿ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾ ಆಸ್ಪತ್ರೆಯಿಂದ ಡಾ. ರಿತಿಕಾ ಸಾಲಿಯನ್‌ರವರು ಕಾರ್ಯಕ್ರಮದ ಉದ್ಭಾಟನೆ ಮಾಡಿ ವಿದ್ಯಾರ್ಥಿಗಳಲ್ಲಿ ಮಾನಸಿಕ
ಖಿನ್ನತೆ, ಮಾನಸಿಕ ಒತ್ತಡ ಇದರಿಂದಾಗುವ ಸಮಸ್ಯೆಗಳು ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಸರಳವಾಗಿ ನುಡಿದು
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ- ಪರಿಹಾರೋಪಾಯವನ್ನು ನೀಡಿದರು.

ಹೆಣ್ಣು ಮಕ್ಕಳಿಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಕೌನ್ಸಿಲರ್‌ ಶ್ರೀಮತಿ ವಸಂತಿಯವರು * ಹದಿ ಹರೆಯದವರಿಗೆ
ಶಿಕ್ಷಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಹೆಣ್ಣು ಮಕ್ಕಳು ಅವರ ಸ್ವಚ್ಛತೆಯ ಬಗ್ಗೆ. ಶಿಸ್ತು ಬದ್ಧವಾದ ನೈಸರ್ಗಿಕ ಆಹಾರ,
ಉಡುಗೆ-ತೊಡುಗೆಯಲ್ಲಿ ನೈರ್ಮಲ್ಯತೆಯ ಅತೀ ಅಗತ್ಯ’ ಎಂದು ತಿಳಿಸಿದರು.

ವಿದ್ಯಾರ್ಥಿನಿಯರಿಂದ ಕಾರ್ಯಕ್ರಮದ ಮೌಲ್ಯಮಾಪನ ಮಾಡಿದರು. ಜಿಲ್ಲಾ ವೈದ್ಯಕೀಯ ತಂಡದ ಕುಮಾರಿ ಕ್ಯಾಥರಿನ್‌ ಜೆನಿಫರ್‌ರವರು ಹಾಜರಿದ್ದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಮರಿಯ ಜೆಸಿಂತ ಘುರ್ಟಾಡೊರವರು ಸ್ವಾಗತಿಸಿದರು.
ಉಪನ್ಯಾಸಕಿ ಗ್ಲೆನಿಷ ರೇಶ್ಮ ಮೆಂಡೋನ್ಷ ಕಾರ್ಯಕ್ರಮ ನಿರ್ವಹಿಸಿ, ಜುಲಿಯನ ಡಿಸೋಜ ಧನ್ಯವಾದ
ನೀಡಿದರು.