

ಭಾರತೀಯ ಜೇಸಿಐನ ವಲಯ ಹದಿನೈದರ ನೇತೃತ್ವದಲ್ಲಿ ನಿಟ್ಟೆಯಲ್ಲಿ ಜರಗಿದ ವಲಯ ಸಮ್ಮೇಳನದಲ್ಲಿ ಸಾಂತೂರು ವೀಣೇಶ್ ಅಮೀನ್ ಸಾರಥ್ಯದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ವಲಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಅತ್ಯುತ್ತಮ ಪಬ್ಲಿಕ್ ರಿಲೇಷನ್ ಶಿಪ್, ಅತ್ಯುತ್ತಮ ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಸಿಲ್ವರ್ ಲೋಮ್, ರಕ್ತದಾನ ಶಿಬಿರದ ವಿಶೇಷ ಮನ್ನಣೆ, ತರಬೇತಿ ವಿಭಾಗದ ವಿಶೇಷ ಮನ್ನಣೆ, ಕಾರ್ಯಕ್ರಮ ವಿಭಾಗದ ವಿಶೇಷ ಮನ್ನಣೆ, ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದ ವಿಭಾಗದಲ್ಲಿ ಹಲವಾರು ವಿಶೇಷ ಮನ್ನಣೆಗಳನ್ನು ವಲಯಾಧ್ಯಕ್ಷರಾದ ರೋಯನ್ ಉದಯ್ ಕ್ರಾಸ್ತ ಅವರು ಬೆಳ್ಮಣ್ಣು ಜೇಸಿಐಗೆ ನೀಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಸತೀಶ್ ಕೋಟ್ಯಾನ್, ಸರ್ವಜ್ಞ ತಂತ್ರಿ, ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ರವಿರಾಜ್ ಶೆಟ್ಟಿ, ಸತ್ಯನಾರಾಯಣ ಭಟ್, ನಿಯೋಜಿತ ಅಧ್ಯಕ್ಷರಾದ ಅಬ್ಬಡ್ಕ ಸತೀಶ್ ಪೂಜಾರಿ, ಕಾರ್ಯದರ್ಶಿ ದೀಕ್ಷಿತ್ ದೇವಾಡಿಗ, ಸದಸ್ಯರಾದ ರಾಜೇಶ್ ಕುಲಾಲ್, ಹರಿಪ್ರಸಾದ್ ನಂದಳಿಕೆ, ಗಣೇಶ್ ಆಚಾರ್ಯ, ಯುವ ಜೇಸಿ ಅಧ್ಯಕ್ಷ ವೈಶಾಖ್ ಹೆಬ್ಬಾರ್