ಭೀಕರ ರಸ್ತೆ ಅಪಘಾತದಲ್ಲಿ ಶಾಸಕನ ಮಗ ಸೇರಿ ಏಳು ವೈದ್ಯಕೀಯ ವಿದ್ಯಾರ್ಥಿಗಳು ಸಾವು

JANANUDI.COM NETWORK

ಮು೦ಬೈ: ಭೀಕರ ರಸ್ತೆ ಅಪಘಾತದಲ್ಲಿ ಬಿಜಿಪಿ ಶಾಸಕರ ಪುತ್ರ ಸೇರಿದಂತೆ 7
ಜನರು ದುರ್ಮರಣಕ್ಕಿಡಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ.
ವಿದ್ಯಾರ್ಥಿಗಳಿದ್ದ ಕಾರು ಸೆಲ್ನುರಾ ಹಳ್ಳಿಯ ಮಾರ್ಗದಲ್ಲಿ ಸಾಗುತ್ತಿದ್ದಾಗ ಕಾಡುಪ್ರಾಣಿಯೊಂದು ಅಡ್ಡಬ೦ದ ಪರಿಣಾಮ ಈ ಅಪಘಾತ ಸ೦ಭವಿಸಿದೆ. ಕಾಡುಪ್ರಾಣಿಯನ್ನು ರಕ್ಷಿಸಲು ಹೋಗಿ ಕಾರು
ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗಿನ ಮೋರಿಗೆ ಬಿದ್ದಿದೆ.
ಕಾರು ಸ೦ಪೂರ್ಣ ನುಜ್ಜು ಗುಜ್ಜಾಗಿದ್ದು ಬಿಜಿಪಿ ಶಾಸಕರ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಓರ್ವ ವಿದ್ಯಾರ್ಥಿಯ ಹುಟ್ಟುಹಬ್ಬ ಸ೦ಭ್ರಮಾಚರಣೆಗಾಗಿ ಈ ವಿದ್ಯಾರ್ಥಿಗಳು ತೆರಳಿದ್ದು
ಪಾರ್ಟಿ ಮುಗಿಸಿ ವಾಪಸ್‌ ಬರುವಾಗ ಈ ದುರ೦ತ ಸ೦ಭವಿಸಿದೆ ಎ೦ದು ಎಸ್‌ ಪಿ ಪ್ರಶಾ೦ತ್‌ ಹೋಲ್ಕರ್‌ ತಿಳಿಸಿದ್ದಾರೆ.
ಈ ಭೀಕರ ಅಪಗಾತದಲ್ಲಿ ಬಿಜಿಪಿ ಶಾಸಕ ವಿಜಯ್‌ ಭರತ್‌ ಲಾಲ್‌ ಪುತ್ರ ಆವಿಷ್ಕಾರ್‌, ನೀರಜ್‌ ಚವನ್‌, ನಿತೇಶ್‌ ಸಿಂಗ್‌, ವಿವೇಕ್‌ ನಂದನ್‌, ಪ್ರತ್ಯುಷ್‌ ಸಿಂಗ್‌, ಶುಭ೦ ಜೈಸ್ಟಾಲ್‌, ಪವನ್‌ ಶಕ್ತಿ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.