ಕುಂದಾಪುರದ ಹಿರಿಯ ವಕೀಲ ಗಡಾಹದ್ ರಾಮಕೃಷ್ಣರಾವ್ ನಿಧನ

JANANUDI.COM NETWORK


ಕುಂದಾಪುರ,F.28: ಕುಂದಾಪುರದ ಹಿರಿಯ ವಕೀಲ, ಕುಂದಾಪುರ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ಗಡಾಹದ್ ರಾಮಕೃಷ್ಣ ರಾವ್ (87) ಫೆ. 27 ರಂದು ರಾತ್ರಿ ನಿಧನರಾದರು.
ಜಿ.ಆರ್.ರಾವ್. ಮತ್ತು “ಗಡಾಲ್” ರು ಎಂದೇ ಕರೆಯಲ್ಪಡುತ್ತಿದ್ದ ಇವರು, ಕುಂದಾಪುರದ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯರಾದವರು. ಕುಂದಾಪುರದ ರೋಟರಿಕ್ಲಬ್, ರೋಟರಿ ದಕ್ಷಿಣದ ಪ್ರೋಬಸ್ ಕ್ಲಬ್, ನೆಹರೂ ಸ್ಪೋರ್ಟ್ ಕ್ಲಬ್‍ನ ಹಿರಿಯ ಸದಸ್ಯರಾಗಿದ್ದ ರಲ್ಲದೇ, ಶ್ರೀ ಕುಂದೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಸಹಕಾರಿ ಕ್ಷೇತ್ರದಲ್ಲೂ ಸಹಕಾರ ಸಂಘಗಳ ನಿರ್ದೇಶಕರಾಗಿ ಶ್ರಮಿಸಿದವರು.
ಕುಂದಾಪುರದ ಬಹುತೇಕ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಅವರು, ಸಾಹಿತ್ಯಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳು ತ್ತಿದ್ದರು.
ಇವರು ಇಬ್ಬರು ಪತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಸಂಘಸಂಸ್ಥೆಗಳ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.