ಭಾರತ್ ಸ್ಕೌಟ್ಸ್ ಗೈಡ್ ಸ್ಥಳೀಯ ಸಂಸ್ಥೆ ಕಾರ್ಯಾಲಯ ಉದ್ಘಾಟನೆ

JANANUDI.COM NETWORK

ಕುಂದಾಪುರ, ಜ.11 ಭಾರತ್ ಸ್ಕೌಟ್ಸ್ ಗೈಡ್ ಸ್ಥಳೀಯ ಸಂಸ್ಥೆ ಕುಂದಾಪುರದ ವತಿಯಿಂದ ಸ್ಥಳೀಯ ಸಂಸ್ಥೆಯ ಕಾರ್ಯಾಲಯ ಉದ್ಘಾಟನೆ ಮಾಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಒಂದು ಕೊಠಡಿಯನ್ನು ಸ್ಕೌಟ್ ಚಟುವಟಿಕೆಗಳಿಗೆ ನೀಡಿದ್ದರು. ಇದರ ಉದ್ಘಾಟನಾ ಸಮಾರಂಭವು ದಿನಾಂಕ : 11-01-2021ರಂದು ನಡೆಸಿ ಉದ್ಘಾಟನೆಯನ್ನು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಸದಾನಂದ ಬೈಂದೂರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ತಾಲೂಕು ಟಿ.ಪಿ.ಒ.ರವರಾದ ಶ್ರೀ ದತ್ತಾತ್ರೇಯ ನಾಯಕ್, ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀ ಕೃಷ್ಣ ಮೂರ್ತಿ ಸರ್, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗುಣರತ್ನ, ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕೆ.ಆರ್.ನಾಯಕ್ ಕಾರ್ಯದರ್ಶಿ ರೇಖಾ ಕೆ.ಯು., ಖಜಾಂಚಿ ಶ್ರೀ ವೀರೇಂದ್ರ ಸರ್, ಜಿಲ್ಲಾ ಹಂತದಿಂದ ಶ್ರೀ ಆನಂದ ಅಡಿಗ ಸರ್, ಶ್ರೀ ದಿನಕರ ಪಾಟೀಲ್, ಶ್ರೀ ಕೊಗ್ಗ ಗಾಣಿಗ, ಶ್ರೀಮತಿ ಸುಮನಾ ಶೇಖರ್, ಶ್ರೀ ನಿತಿನ್ ಅಮಿನ್ ಉಪಸ್ಥಿತರಿದ್ದರು.
ಎಲ್ಲಾ ಕುಂದಾಪುರ ವಲಯದ ಎಲ್ಲಾ ಸ್ಕೌಟ್ಸ್ ಗೈಡ್ ಶಿಕ್ಷಕ ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ದಳಗಳನ್ನು ನೊಂದಣಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕೊಗ್ಗ ಗಾಣಿಗರು ಎಲ್ಲರನ್ನು ಸ್ವಾಗತಿಸಿದರು. ಶ್ರೀ ಆನಂದ ಅಡಿಗ ಸರ್ ಅವರು ಧನ್ಯವಾದಗಳನ್ನು ಸಲ್ಲಿಸಿ, ಕಾರ್ಯಕ್ರಮವನ್ನು ಶ್ರೀ ಸದಾನಂದ ಶೆಟ್ಟಿ ಸ್ಕೌಟ್ ಮಾಸ್ಟರ್ ಇವರು ನಿರೂಪಿಸಿದರು.