ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕುಂದಾಪುರದ ಸತೀಶ್ ಖಾರ್ವಿ, ಅಶೋಕ್ ಜಿ. ವಿ.ಯವರಿಗೆ ಚಿನ್ನದ ಪದಕಗಳು

JANANUDI.COM NETWORK

ಕುಂದಾಪುರ, ಮಾ.12: ನಿನ್ನೆ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 66 ಕೆಜಿ ವಿಭಾಗದಲ್ಲಿ 115 ಕೆಜಿ ಭಾರವನ್ನು ಎತ್ತಿ ಸತೀಶ್ ಖಾರ್ವಿ ಇವರು ಚಿನ್ನದ ಪದಕವನ್ನು ಹಾಗೂ 84 ಕೆಜಿ ವಿಭಾಗದಲ್ಲಿ 100 ಕೆ ಜಿ ಭಾರವನ್ನು ಎತ್ತಿ ಅಶೋಕ್ ಜಿ. ವಿ ಇವರು ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ. ಸತೀಶ್ ಖಾರ್ವಿ ಇವರು, ಈ ಮೊದಲು ಅನೇಕ ಛಾಂಪಿಯನ್ ಶಿಫನಲ್ಲಿ ಪದಕ ಗಳಿಸಿದವರಾಗಿ, ಅವರು ಕುಂದಾಪುರದ ಹರ್ಕುಲಸ್ ಜಿಮ್ ನ ವ್ಯವಸ್ಥಾಪಕರು ಹಾಗೂ ತರಬೇತುದಾರರು ಆಗಿರುತ್ತಾರೆ.