

ಮರಳು ಶಿಲ್ಪ:- ಪ್ರಥಮ ಪೂಜಿತ, ಜ್ಞಾನ ಮತ್ತು ಬುದ್ದಿಯ ಅಧಿಪತಿ, ಗಣಗಳ ಒಡೆಯನಾದ ಗಣೇಶನ ಹಬ್ಬದ ಆಚರಣೆ ದೇಶಾದ್ಯಂತ ತಯಾರಿಯಲ್ಲಿರುವ ಈ ಸುಸಂದರ್ಭದಲ್ಲಿ ಕಲಾಕೃತಿಯ ಮೂಲಕ 15 ವಿದ್ಯಾರ್ಥಿಯರ ಕೈಯಲ್ಲಿ ಮೂಡಲಿರುವ ಗಣೇಶ ಮೂಡಿ ಬಂದನು.
*ಕಲಾಕೃತಿಯ ವಿಶೇಷತೆ*
ಮೋದಕ ಪ್ರಿಯ ಸೊಂಡಿಲ ಬಾಲ ಗಣಪ ಪ್ರಕೃತಿ ಮಡಿಲಲ್ಲಿ -ಬುದ್ದಿಯ ಪ್ರತೀಕವಾಗಿ ಮೂಷಿಕ ವಾಹನವನ್ನು ವಿಶ್ವ ಪರ್ಯಾಟನೆಯ ಸಂಕೇತವಾಗಿ ಶಿವಲಿಂಗದೊಂದಿಗೆ ಬಣ್ಣದ ಮೂಲಕ ಕಂಗೊಳಿಸುವ “ವರ್ಣ ವಿನಾಯಕ ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾವಿದ ಮತ್ತು ತ್ರಿವರ್ಣ ಕಲಾಕೇಂದ್ರದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಚಿಸಲಾಯಿತು.
ಭಾಗವಹಿಸಿದ ವಿದ್ಯಾರ್ಥಿಗಳು
ಅದ್ವಿತ್ ಕುಮಾರ್, ಸಮೃದ್ಧಿ, ಕಾರ್ತಿಕ್ ಕೊತ್ವಲ್, ಯಶಸ್ ಕೆ. ಹೆಚ್., ಕೃತಿ ಕೆ.ದೇವಾಡಿಗ, ಸಮರ್ಥ್, ತನ್ಮಯ್ ಪಡ್ತೀ, ನಿಯತಿ ಎನ್. ಪೈ, ನಿಧಿ ವಿಜಯ್, ರಿತೇಶ್ ಪ್ರಭು, ನಿಶ್ಚಿತ ವಿ. ಹೆಚ್, ಸಾತ್ವಿಕ್ ಶೆಣೈ, ಪ್ರಣೀತ್ ಪಿ. ಶೆಟ್ಟಿ, ಯಶ್ಮಿತಾ ಜಿ.ರವರು 4 ಅಡಿ ಎತ್ತರ ಮತ್ತು 9 ಅಡಿ ಅಗಲಗಳುಳ್ಳ ಬಣ್ಣದ ಕಲಾಕೃತಿಯನ್ನು ರಚಿಸಿದರು.
ಶಿಕ್ಷಕಿ ಶ್ರೀಮತಿ ಚೇತನಾ ಜಿ. ಸಂತೋಷ್ ಹಾಲಾಡಿ ಸಹಕರಿಸಿದರು.

