ರೋಟರಿ ಕ್ಲಬ್ ಕುಂದಾಪುರ ದಕ್ಷಿಣ,ತಲ್ಲೂರು ರೋಟರಿ ಸಮುದಾಯ ದಳ ಸೇರಿ ಹೊಲಿಗೆ ಯಂತ್ರ ಹಸ್ತಾಂತರ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ತಲ್ಲೂರು ರೋಟರಿ ಸಮುದಾಯ ದಳ ಸೇರಿ ಹಟ್ಟಿಯಂಗಡಿಯ ಶ್ರೀಮತಿ ಆಚಾರ್ಯರಿಗೆ ಸ್ತ್ರೀ ಸಬಲೀಕರಣದ ಯೋಜನೆಯ ಭಾಗವಾಗಿ ರೋ. ಕೆ. ಪಿ. ಭಟ್ ಹಾಗೂ ರೋ. ಶೋಭಾ ಭಟ್ ದಂಪತಿಗಳು ಕೊಡ ಮಾಡಿದ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು.
ರೋಟರಿ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ರೋ. ಕೆ.ಪಿ ಭಟ್, ಸಭಾಪತಿ ರೋ. ಓಝ್ಲಿನ್ ರೆಬೆಲ್ಲೊ, ಸಮುದಾಯ ದಳದ ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಸದಾನಂದ ಆಚಾರ್ಯ ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.