ರೊಟ್ರ್ಯಾಕ್ಟ್ ಕೊಟೇಶ್ವರ , 8 ಸ್ಟಾರ್ ಕ್ರಿಕೆಟರ್ಸ್ ಸಹಯೋಗದೊಂದಿಗೆ ಆರಕ್ಷಕ ಠಾಣೆ ಕುಂದಾಪುರ ವತಿಯಿಂದ ಅಪರಾಧ ತಡೆ ಮಾಸಾಚರಣೆ, ಯೋಧರಿಗೆ ಶ್ರದ್ಧಾಂಜಲಿ

ವರದಿ : ರಾಕೇಶ್ ಶೆಟ್ಟಿ

ರೋಟರ್ಯಾಕ್ಟ ಕ್ಲಬ್ ಕೊಟೇಶ್ವರ ಮತ್ತು 8 ಸ್ಟಾರ್ ಕ್ರಿಕೆಟರ್ಸ ತೆಂಕಬೆಟ್ಟು ವಕ್ವಾಡಿ ಸಹಯೋಗದೊಂದಿಗೆ ಆರಕ್ಷಕ ಠಾಣೆ ಕುಂದಾಪುರ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ತೆಂಕಬೆಟ್ಟು ಬ್ರಹ್ಮಲಿಂಗೆಶ್ವರ ದೇವಸ್ಥಾನದಲ್ಲಿ ಜರುಗಿತು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮುಕ್ತೆಷರುರಾದ ಬಾಲಕೃಷ್ಣ ಶೆಟ್ಟಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಆರಕ್ಷಕ ಠಾಣೆಯ ಠಾಣಾಧಿಕಾರಿಯಾದ ಶ್ರೀ ಸದಾಶಿವ ಗೌರೂಜಿ ಅವರು ಆಗಮಿಸಿ ರಸ್ತೆ ಅಪಘಾತದಲ್ಲಿ ಉಂಟಾಗುವ ಬಗ್ಗೆ ಗಾಂಜಾ ಅಫೀಮು ಮತ್ತು ಸಮಾಜದಲ್ಲಿ ಉಂಟಾಗುವ ಸಾಮಾಜಿಕ ಜಾಲತಾಣದ ದುಷ್ಪರಿಣಾಮ ಬಗ್ಗೆ ಅರಿವು ಮುಡಿಸಿ ಅಪರಾಧ ತಡೆ ಮಾಸಾಚರಣೆ ಕುರಿತು ಮಾಹಿತಿ ನೀಡಿದರು , ಸಹ ಠಾಣಾಧಿಕಾರಿ ಸುಧಾಕರ , ಧರ್ಮಸ್ಥಳ ಸಂಘದ ಸಮನ್ವಯಾಧಿಕಾರಿ ಸುಗುಣ ಹವಲ್ದಾರ, ರೋಟರ್ಯಾಕ್ಟ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ವಕ್ವಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಅಧ್ಯಾಪಕರಾದ ರಮೇಶ್ ಶೆಟ್ಟಿ , ರಾಕೇಶ್ ಶೆಟ್ಟಿ ವಕ್ವಾಡಿ ಸ್ವಾಗತಿಸಿ, ಆನಂದ ಶೆಟ್ಟಿ ಧನ್ಯವಾದ ಸಲ್ಲಿಸಿದರು. 8 ಸ್ಟಾರ್ ಕ್ರಿಕೆಟ್ ನ ಸದಸ್ಯ ಉದಯ ಶೆಟ್ಟಿ , ಪ್ರವೀಣ, ಗಣೇಶ್ ಶೆಟ್ಟಿ ಮತ್ತು ಧರ್ಮಸ್ಥಳ ಸಂಘದ ಸದಸ್ಯರು ಉಪಸ್ಥಿತರಿದ್ದರು.