ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯರಿಂದ ಕುಂದಾಪುರ ಗಡಿಯಾರ ಗೋಪುರವನ್ನು ಆಕರ್ಷಣೆ ಶೈಲಿಯಲ್ಲಿ ನವೀಕರಣ

ಕುಂದಾಪುರ:ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಸವಿ ನೆನಪಿಗಾಗಿ ಈಗಾಗಲೇ ನಂದಿಕೇಶ್ವರ ಫ್ರೇಂಡ್ಸ್ ನಿರ್ಮಿಸಿದ್ದ ಗಡಿಯಾರ ಗೋಪುರವನ್ನು ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯರು ವಿನೂತನ ರೀತಿಯ ಆಕರ್ಷಣೆ ಶೈಲಿಯಲ್ಲಿ ನವೀಕರಣಗೊಳಿಸಿದ್ದಾರೆ.

ಇನ್ನರ್ ವ್ಹೀಲ್ ಕ್ಲಬ್ಬಿನ ಜಿಲ್ಲಾ ಸಭಾಪತಿ ಶ್ರೀಮತಿ ಕವಿತಾ ನಿಯತ್ ನವೀಕರಿಸಿದ ಗಡಿಯಾರ ಗೋಪುರ ಉದ್ಘಾಟಿಸಿ, ನಗರ ಸೌಂದರ್ಯ ಹೆಚ್ಚಿಸುವಲ್ಲಿ ವೃತ್ತಗಳು, ಗಡಿಯಾರ ಗೋಪುರಗಳು ಸಹಕಾರಿ ಎಂದು ಹೇಳಿದರು.

ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷರಾದ ಸುಮಾ ಪುತ್ರನ್ ಸ್ವಾಗತಿಸಿ, ಕಾರ್ಯದರ್ಶಿ ರಶ್ಮಿ ಶೇಟ್ ವಂದಿಸಿದರು.

ಪುರಸಭಾ ಸದಸ್ಯರಾದ ಮೋಹನದಾಸ ಶೆಣೈ, ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಪುಷ್ಪಾ ಶೇಟ್, ರೋಟರಿ ವಲಯ ಒಂದರ ಸಹಾಯಕ ಗವರ್ನರ್ ರೊ ಡಾ ಉಮೇಶ್ ಪುತ್ರನ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಇನ್ನರ್ ವ್ಹೀಲ್ ನ ಸದಸ್ಯರು ಹಾಗೂ ಹೂವಿನ ಮಾರುಕಟ್ಟೆಯವರು ಉಪಸ್ಥಿತರಿದ್ದರು.