ರೆಡ್ ಕ್ರಾಸ್ ಕುಂದಾಪುರ-ತಾಲೂಕು ಆಫೀಸಿನ ಕಂದಾಯ ಇಲಾಖೆಯ 35 ಜನ ಸಹಾಯಕರಿಗೆ ರೇಶನ್ ಕಿಟ್

JANANUDI.COM NETWORK

ಕುಂದಾಪುರ,ಜೂ.10: ಈ ದಿನ ಭಾರತೀಯ ರೆಡ್ ಕ್ರಾಸ್ ಕುಂದಾಪುರ ತಾಲೂಕು ಶಾಖೆ, ತಾಲೂಕು ಆಫೀಸಿನಲ್ಲಿ ಕಂದಾಯ ಇಲಾಖೆಯ 35 ಜನ ಸಹಾಯಕರಿಗೆ ರೇಶನ್ ಕಿಟ್ ( Dry ration kit) ನ್ನು ನೀಡಲಾಯಿತಯ. ಇದರ ಒಟ್ಟು ಬೆಲೆ ರೂ. 35000/- ಇದನ್ನು ರೆಡ್ ಕ್ರಾಸ್ ಸಂಸ್ಥೆಯ ಅದ್ಯಕ್ಷ ರಾದ ಸಹಾಯಕ ಕಮಿಷನರ್ ಶ್ರೀ ರಾಜು ಕೆ. ಇವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಭಾಪತಿ ಗಳಾದ ಶ್ರೀ ಎಸ್‌ ಜಯಕರ ಶೆಟ್ಟಿ, ಉಪಾಧ್ಯಕ್ಷ ರಾದ ಆನಂದಪ್ಪ ನಾಯಕ್ ( ತಶೀಲ್ದಾರರು), ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಕಂದಾಯ ಅಧಿಕಾರಿ ದಿನೇಶ್ ಹಾಜರಿದ್ದರು.