ಆರ್. ಎನ್.ಶೆಟ್ಟಿ ಪ. ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯದಿನಾಚರಣೆ- ದೇಶಪ್ರೇಮದ ಬಗ್ಗೆ ಎಳೆಪ್ರಾಯದ ಅದಮ್ಯ ಉತ್ಸಾಹ ಮರುಕಳಿಸ ಬೇಕು 

ಕುಂದಾಪುರದ ಆರ್ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ.ನಮ್ಮ ನಮ್ಮ ವ್ಯಾಪ್ತಿಯಲ್ಲಿಕಾರ್ಯಕ್ಷೇತ್ರದಲ್ಲಿ ನಮ್ಮಲ್ಲಿರುವ ಪ್ರತಿಭೆ– ಕೌಶಲ್ಯವನ್ನು ಉಪಯೋಗಿಸಿ ದೇಶದ ಅಭಿವೃದ್ಧಿಗೆ ತಳಮಟ್ಟದಿಂದ ಯತ್ನಿಸಬೇಕು.  ಯಾವುದೋ ಒಂದು ಚೌಕಟ್ಟಿನಲ್ಲಿ ನಿತ್ಯಜೀವನದ ಚಟುವಟಿಕೆಗಳನ್ನು ಮಾಡುವ ನಾವು ದೇಶಪ್ರೇಮದ ವಿಚಾರದಲ್ಲಿ ನಮ್ಮ ಎಳೆಪ್ರಾಯದಲ್ಲಿರುತ್ತಿದ್ದ ಸ್ವಯಂಸ್ಪೂರ್ತಿಯ ಉತ್ಸಾಹವನ್ನು‌ ಮತ್ತೆ ಪಡೆಯುವಂತಾಗಬೇಕು ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಯವರನ್ನು ಹೆಚ್ಚಿನ‌ ಸಂಖ್ಯೆಯಲ್ಲಿ  ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸಬೇಕು‘ ಎಂದು ಆರ್ಎನ್ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ‌ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ  ಧ್ವಜಾರೋಹಣಗೈದು ಕರೆ ನೀಡಿದರುಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ಕಾರ್ಯಕ್ರಮ ನಿರ್ವಹಿಸಿದರುಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಂದೀಪ್ ಪೂಜಾರಿಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ದೇಶಿಸಿದರುಕಾಲೇಜಿನ ಎಲ್ಲಾ ಬೋಧಕಬೋಧಕೇತರ ಸಿಬ್ಬಂದಿಗಳು  ಸಂದರ್ಭದಲ್ಲಿ ಉಪಸ್ಥಿತರಿದ್ದರು.