ಪಥಸಂಚಲನದಲ್ಲಿ ಭಾಗವಹಿಸಿದ ಗೃಹರಕ್ಷಕರ ತಂಡಗಳಿಗೆ ಬಹುಮಾನ

ಕೋಲಾರ : 75 ನೇ ಸ್ವಾತಂತ್ರ್ಯವ ಅಮೃತ ಮಹೋತ್ಸವ ಅಂಗವಾಗಿ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಕವಾಯತ್‌ನಲ್ಲಿ ಸಮಾದೇಷ್ಟ ಹಾಗೂ ಉಪ ಸಮಾದೇಷ್ಟರ ಮಾರ್ಗದರ್ಶನಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಒಟ್ಟು 5 ಗೃಹರಕ್ಷಕರ ತಂಡ ಪದಸಂಚಲನದಲ್ಲಿ ಪಾಲ್ಗೊಂಡಿದ್ದು ಈ ಪೈಕಿ 4 ತಂಡಗಳು ಬಹುಮಾನಗಳನ್ನು ಪಡೆದಿರುತ್ತದೆ . ನಂ.39-436 ಇವುಗಳಲ್ಲಿ ಪುರುಷರ ತಂಡಗಳು ಪ್ರಥಮ ಬಹುಮಾನ , ಪ್ರವಾಸೋದ್ಯಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ತಂಡವು ದ್ವಿತೀಯ ಬಹುಮಾನವನ್ನು ಹಾಗೂ ಕೆ.ಜಿ.ಎಫ್ ಪ್ರದೇಶದ ಪುರುಷರ ತಂಡ ಮತ್ತು ಮಹಿಳೆಯ ತಂಡ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ . ಕೋಲಾರ ನಗರ ಮತ್ತು ಕೆ.ಜಿ.ಎಫ್ ಪ್ರದೇಶದ ಪಥಸಂಚಲನದಲ್ಲಿ ಭಾಗವಹಿಸಿ ಯಶಸ್ವಿಗೆ ಪಾತ್ರರಾದ ಎಲ್ಲಾ ಗೃಹರಕ್ಷಕರಿಗೆ ಸಮಾದೇಷ್ಟರಾದ ಕೆ.ಆರ್.ಕಿರಣ್ ಕುಮಾರ್ , ಉಪ ಸಮಾದೇಷ್ಟರಾದ ಆರ್.ರಾಜೇಂದ್ರನ್ , ಸೆಕೆಂಡ್ ಇನ್ ಕಮಾಂಡರ್ ಎಸ್.ಮಾರುತಿ , ಪಟೂನ್ ಕಮಾಂಡರ್ ಎನ್.ಗೋವಿಂದರಾಜು , ಜಿ.ಎಸ್.ದಿಲೀಪ್ ಕುಮಾರ್ ಸೇರಿದಂತೆ ಮತ್ತಿತರರು ಅಭಿನಂದನೆ ಸಲ್ಲಿಸಿದರು.