ಕುಂದಾಪುರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಓಸ್ಕರ್ ಫೆರ್ನಾಂಡಿಸ್ ರವರ ಆರೋಗ್ಯ ಶೀಘ್ರ ಚೇತರಿಕೆ ಚರ್ಚ್,ದೇವಸ್ಥಾನ ಮತ್ತು ಮಸೀದಿಯಲ್ಲಿ ಪ್ರಾರ್ಥನೆ

ಹೋಲಿ ರೋಜರಿ ಚರ್ಚ್ ವಿಶೇಷ ಪ್ರಾರ್ಥನೆ

ಕುಂದಾಪುರ, ಜು.24; ಇಂದು ಬೆಳಿಗ್ಗೆ ಹೋಲಿ ರೋಜರಿ ಚರ್ಚ್ ಕುಂದಾಪುರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಓಸ್ಕರ್ ಫೆರ್ನಾಂಡಿಸ್ ರವರ ಆರೋಗ್ಯ ಶೀಘ್ರ ಚೇತರಿಕೆಯಿಂದ ಗುಣಮುಖಕ್ಕಾಗಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಧರ್ಮಗುರುಗಳಾದ ಅತಿವಂದನೀಯ ಸ್ಟ್ಯಾನಿ ತಾವ್ರೂ ರವರು ಪ್ರಾರ್ಥನೆ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಜಾಕೋಬ್ ಡಿಸೋಜಾ – ಮಾಜಿ ಅಧ್ಯಕ್ಷರು ನಗರ ಪ್ರಾಧಿಕಾರ , ವಿನೋದ್ ಕ್ರಾಸ್ಟೋ – ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಶಾಲೇಟ್ ರೆಬೆಲ್ಲೋ – ನ್ಯಾಯವಾದಿ , ಆಶಾ ಕರ್ವಾಲೋ – ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ , ಪಂಚಾಯತ್ ಸದಸ್ಯರಾದ ಸ್ಟೀವನ್ ಡಿಕೋಸ್ಟಾ , ರೋಷನ್ ಬರೆಟ್ಟೋ , ಶೈನಿ ಕ್ರಾಸ್ತಾ , ಜೆರಾಲ್ಡ್ ಕ್ರಾಸ್ತಾ – ಮಾಜಿ ಪಂಚಾಯತ್ ಸದಸ್ಯರು . ಕಾಂಗ್ರೆಸ್ ಸದಸ್ಯರಾದ – ಸುವರ್ಣ ಅಲ್ಮೇಡ, ನಿತಿನ್ ಡಿಸೋಜಾ , ಎಡೊಲ್ಪ್ ಡಿ ಕೋಸ್ಟಾ , ಪ್ರಮೆಸ್ತ್ ಕರ್ವಾಲೋ , ಡೆನಿಸ್ ಕೋತಾ , ರೋಶನ್ ಡಿಸೋಜಾ , ಸಂತೋಷ ಬರೆಟ್ಟೂ , ಜೇಮ್ಸ್ ಕ್ರಾಸ್ತಾ , ಅಂತೋನಿ ಅಲ್ಮೆಡ್ ಇನ್ನಿತರು ಉಪಸ್ಥಿತರಿದ್ದರು .

ಆನೆಗುಡ್ಡೆಗೆ ದೇವಸ್ಥಾನದಲ್ಲಿ ವಿಶೇಷ ಸೇವೆ

ಕಾಂಗ್ರೇಸ್ ಹಿರಿಯ ನಾಯಕ, ಉಡುಪಿ ಜಿಲ್ಲೆಯ ಅಜಾತ ಶತ್ರು, ಆಸ್ಕರ್ ಪೆರ್ನಾಂಡೀಸ್ ರವರ ಆರೋಗ್ಯ ಚೇತರಿಕೆಗಾಗಿ, ಆನೆಗುಡ್ಡೆಗೆ ವಿಶೇಷ ಸೇವೆ ಸಲ್ಲಿಸಿ, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಕುಂದಾಪುರ ಕಾಂಗ್ರೇಸ್ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಹಿರಿಯ ನಾಯಕ ಹಿರಿಯಣ್ಣ, ಕಾಂಗ್ರೇಸ್ ಮುಖಂಡ ಬೀಜಾಡಿ ಅಶೋಕ್ ಪೂಜಾರಿ, ವಿಕಾಸ್ ಹೆಗ್ಡೆ ಮತ್ತು ರಮೇಶ್ ಶೆಟ್ಟಿ ವಕ್ವಾಡಿ.

ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಕುಂದಾಪುರದ ಜಾಮಿಯಾ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ರವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಹಾರೂನ್ ಸಾಹೇಬ್ , ಪುರಸಭಾ ಸದಸ್ಯರಾದ ಅಬೂ ಮಹ್ಮದ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.