ಜನರು ಸಂವಿಧಾನದ ಆಶಯವನ್ನು ಸಾಕಾರಗೊಳಿಸಬೇಕು : ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜನರು ಸಂವಿಧಾನದ ಆಶಯವನ್ನು ಸಾಕಾರಗೊಳಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಯುವ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಬದುಕು ಸಮಾಜಕ್ಕೆ ಶಕ್ತಿಯಾಗಿದೆ. ಶಿಕ್ಷಣದಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಅಂಬೇಡ್ಕರ್ ನಿದರ್ಶನ. ಬಡತನ ಹಾಗೂ ಸಾಮಾಜಿಕ ಅಸಮಾನತೆ ನಡುವೆ ಮೇಲೆ ಬಂದ ಬಾಬಾ ಸಾಹೇಬರ ಸಾಧನೆಯ ಹಿಂದೆ ಪರಿಶ್ರಮವಿದೆ. ಗುರಿ ಮುಟ್ಟುವ ಛಲವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ವೇದಿಗೆ ಸದಸ್ಯರು ಅಂಬೇಡ್ಕರ್ ಆಶಯ ಗೀತೆಗಳನ್ನು ಹಾಡಿದರು. ಗ್ರಾಮದಲ್ಲಿ ಅಂಬೇಡ್ಕರ್ ಭಾವ ಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಅಮಿಡಪ್ಪ, ಶ್ರೀನಿವಾಸ್, ಗೋಪಾಲರೆಡ್ಡಿ, ಅಶ್ವಥ್, ಇರಗಪ್ಪಸ್ವಾಮಿ, ವೆಂಕಟರಾಮ್, ರಾಮಾಂಜಿ, ರಾಮಚಂದ್ರ, ಗೋಪಾಲ್, ಮಂಜುನಾಥ್, ರಾಮಾನುಜಾಸ್ವಾಮಿ ಇದ್ದರು.