ಕುಂದಾಪುರ ಖಾಸಗಿ ಕಾಲೇಜ್ ಪಿ ಅರ್ ಓ. ವಿದ್ಯಾರ್ಥಿನಿಯರಿಗೆ ಪೋಲಿ ಮೆಸೇಜ್ ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ

JANANUDI.COM NETWORK


ಕುಂದಾಪುರ, ಫೇ.24 : ಕಾಲೇಜು ವಿದ್ಯಾರ್ಥಿನಿಯರಿಗೆ ಪೋಲಿ ಮೆಸೇಜ್ ಕಳುಹಿಸಿದ ಹಿನ್ನೆಲೆಯಲ್ಲಿ ಪೊಲೀ ಪಿ ಅರ್ ಓ.ವಿರುದ್ಧ ವಿದ್ಯಾರ್ಥಿಗಳು ಹಠಾತ್ ಪ್ರತಿಭಟನೆ ನಡೆಸಿತು .
ಬೈಂದೂರು ಶಾಸಕರ ಅಡಳಿತದಲ್ಲಿರುವ ಕಾಲೇಜಿನ ಸಿಬಂದಿಯೋರ್ವ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಆರೋಪ ಹಿನ್ನಲೆಯಲ್ಲಿ
ಬಿಬಿ ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದರು.
ಕಾಲೇಜು ವಿದ್ಯಾರ್ಥಿನಿಯರಿಗೆ ರಾತ್ರಿ ಅಶ್ಲೀಲ ಸಂದೇಶ ಕಳಿಸುತ್ತಿರುವ ಸಿಬಂದಿ ವಿರುದ್ದ ಪ್ರಾಂಶುಪಾಲರಿಗೆ ದೂರು ನೀಡಿದರೂ ಯಾವುದೇ ಶಿಸ್ತುಕ್ರಮ ಜರುಗಿಸದ ಆಡಳಿತ ಮಂಡಳಿ ವಿರುದ್ದ ವಿದ್ಯಾರ್ಥಿಗಳಿಂದ ಕಾಲೇಜು ಮುಂಭಾಗದಲ್ಲಿ ಧರಣಿ ನಡೆಸಿದರು.
ಪಿಆರ್ ಓ ವಿರುದ್ದ ಆಕ್ರೋಶ ಹೊರಹಾಕಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲ ಉಮೇಶ್ ರವರಿಗೆ ಮನವಿ ನೀಡಿದರು.ಮನವಿ ಸ್ವೀಕರಿಸಿದ ಪ್ರಾಂಶುಪಾಲರು ಅರೋಪಿತ ಸಿಬಂದಿ ವಿರುದ್ದ ಶಿಸ್ತುಕ್ರಮ ಜರುಗಿಸುವ ಭರವಸೆ ನೀಡಿದರು.
ಅದರೆ ವಿದ್ಯಾರ್ಥಿಗಳು ಪಿಆರ್ ಓ ಅನ್ನು ಸ್ಥಳಕ್ಕೆ ಕರೆಸಬೇಕೆಂದು ಪಟ್ಟು ಹಿಡಿದು ಬಿಸಿಲನ್ನೂ ಲೆಕ್ಕಿಸದೇ ಸ್ಥಳದಲ್ಲೇ ಧರಣಿ ಕುಳಿತರು .ಅಷ್ಟೇ ಅಲ್ಲದೇ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು . ಸ್ಥಳಕ್ಕೆ ಅಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.