ಗಾಂಧಿ ಜಯಂತಿಯ ಪ್ರಯುಕ್ತ ‘ಸ್ವಚ್ಛತೆಯೇ ನಮ್ಮ ನಮ್ಮ ಗುರಿ’ ಬೆಳ್ಮಣ್ ಬಸ್ ಸ್ಟ್ಯಾಂಡ್ ಪರಿಸರದಲ್ಲಿ

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್ :  ಗಾಂಧಿ ಜಯಂತಿಯ ಪ್ರಯುಕ್ತ ,ಸ್ವಚ್ಛತೆಯೊಂದಿಗೆ… ಮಹಾತ್ಮ ನತ್ತ ..ನಮ್ಮ ಚಿತ್ತ..ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಬೆಳ್ಮಣ್ ಜೇಸಿಐ ಘಟಕದ ವತಿಯಿಂದ ‘ಸ್ವಚ್ಛತೆಯೇ ನಮ್ಮ  ನಮ್ಮ ಗುರಿ’ ತಂಡ ಇವರ ಸಹಯೋಗದೊಂದಿಗೆ   ಬೆಳ್ಮಣ್ ಬಸ್ ಸ್ಟ್ಯಾಂಡ್  ಪರಿಸರದಲ್ಲಿ ನಡೆಯಿತು.ಜೆಸಿಐ ಬೆಳ್ಮಣ್ ಘಟಕದ ಅಧ್ಯಕ್ಷರಾದ ಜೆ ಎಫ್ ಎಂ  ಕೃಷ್ಣ ಪವಾರ್ , ಜೆಸಿಐ ಬೆಳ್ಮಣ್ ಪೂರ್ವಾಧ್ಯಕ್ಷರಾದ ಜೇಸಿ ಸರ್ವಜ್ಞ ತಂತ್ರಿ,ಸದಸ್ಯರಾದ ಜೆ ಸಿ ಗಣೇಶ್ ಆಚಾರ್ಯ,ಜೆಸಿ ಸುಜಾನಾ ಕ್ಯಾಸ್ಟಲಿನೊ ,ಜೆಸಿ ವೈಶಾಖ್ ,ಜೆಜೆಸಿ ಅಧ್ಯಕ್ಷರಾದ ಪ್ರಥಮ್ ಮಲ್ಯ ಉಪಸ್ಥಿತರಿದ್ದು ಸಹಕರಿಸಿದರು.